ಕಾಸರಗೋಡು: ನೆಕ್ರಾಜೆ ಸಂತಾನ ಗೋಪಾಲಕೃಷ್ಣ ದೇವಾಲಯದ ಫೇಸ್ಬುಕ್ ಅಕೌಂಟ್ಗೆ ಚಾಲನೆ ನೀಡಲಾಗಿದೆ. ಮೇ 7ರಿಂದ 15ರವರೆಗೆ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಪ್ರಚಾರ ಸಮಿತಿ ವತಿಯಿಂದ ಫೇಸ್ಬುಕ್ ಖಾತೆ ಆರಂಭಿಸಲಾಗಿದೆ. ‘ಶ್ರೀ ಕ್ಷೇತ್ರ ನೆಕ್ರಾಜೆ’ ಹೆಸರಿನ ಈ ಖಾತೆಯಲ್ಲಿ ದೇವಾಲಯದ ಎಲ್ಲ ಚಟುವಟಿಕೆಗಳ ಮಾಹಿತಿ, ಚಿತ್ರಗಳು, ವಿಡಿಯೊಗಳು ಲಭ್ಯ ಇವೆ.