‘ಕಾಯಿಲೆ ಪೀಡಿತರ ನೇರ ಸಂಪರ್ಕಕ್ಕೆ ಬಂದವರಿಗೆ ಮಾತ್ರ ಈ ರೋಗ ಹರಡುತ್ತದೆ. ಆದರೂ, ಗಡಿಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಕೇರಳದಿಂದ ಬರುವವರಿಗೆ ಕೋವಿಡ್ ಆರ್ಟಿಪಿಸಿಆರ್ ಪರೀಕ್ಷೆ ಜತೆಗೆ, ರೋಗ ಲಕ್ಷಣ ಇದ್ದವರಿಗೆ, ನಿಫಾ ವೈರಸ್ಗೆ ಸಂಬಂಧಿಸಿದ ತಪಾಸಣೆಯನ್ನೂ ನಡೆಸುವಂತೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.