ಸರ್ಕಾರದ ನೀತಿಗಳು ಸರಿಯಾಗಿರದಿದ್ದರೆ ಜನರು ಸಂಕಷ್ಟಕ್ಕೊಳಗಾಗಿ ದೇಶ ದಿವಾಳಿಯಾಗುತ್ತದೆ. ಜನಸಾಮಾನ್ಯರ ಕಷ್ಟದ ಅರಿವಿಲ್ಲದ ಬಹುರಾಷ್ಟ್ರೀಯ ಕಂಪನಿಗಳು ದೇಶದ ಆಡಳಿತ ನಡೆಸುವಂತಾಗಿದೆ. ಕಾರ್ಮಿಕರಿಗೆ ಕನಿಷ್ಠ ಕೂಲಿ, ರಸ್ತೆ, ಆರೋಗ್ಯ ಸಹಿತ ಮೂಲಸವಲತ್ತು ಒದಗಿಸಿ ಜನಸಾಮಾನ್ಯರ ಕಷ್ಟಗಳಿಗೆ ಸರ್ಕಾರ ಸ್ಪಂದಿದಬೇಕು ಎಂದು ಅವರು ಆಗ್ರಹಿಸಿದರು.