‘ಪರ್ಯಾಯದ ಅವಧಿ (2017ರ ಜನವರಿಯಿಂದ 2019 ಜನವರಿ) ಯಲ್ಲಿ ಬಡವರ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ನೆರವು ನೀಡಬೇಕು ಎಂದು ಸಂಕಲ್ಪ ಮಾಡಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ‘ಸಂಜೀವಿನಿ’ ಎಂಬ ಮೊಬೈಲ್ ಚಿಕಿತ್ಸಾಲಯವನ್ನೂ ನಡೆಸಿದ್ದೆವು. ಆದರೆ, ಇಂದು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳೂ ದುಬಾರಿಯಾಗಿದ್ದು, ಅರ್ಹ ಬಡವರಿಗೂ ಅಗತ್ಯಕ್ಕೆ ಬೇಕಾದಷ್ಟು ನೆರವು ನೀಡಲು ಸಾಧ್ಯವಾಗಲಿಲ್ಲ’ ಎಂದು ಬೇಸರವನ್ನು ಹೊರಹಾಕಿದರು.