ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ವ್ಯಾಘ್ರ ಚಾಮುಂಡಿ ದೈವದ ಪುನರ್, ನೇಮೋತ್ಸವ

Published 24 ಮಾರ್ಚ್ 2024, 7:38 IST
Last Updated 24 ಮಾರ್ಚ್ 2024, 7:38 IST
ಅಕ್ಷರ ಗಾತ್ರ

ಬಜಪೆ: ವ್ಯಾಘ್ರ ಚಾಮುಂಡಿ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಕೊರ್ಡೇಲು ಶಿಬ್ರಿಕೆರೆ ತೆಂಕ ಎಡಪದವು ಇಲ್ಲಿನ ಕೊಂದೋಡಿ ಗಡುಸ್ಥಳದಲ್ಲಿ ಜೀರ್ಣೋದ್ಧಾರಗೊಂಡಿರುವ ವ್ಯಾಘ್ರ ಚಾಮುಂಡಿ ದೈವದ ಶಿಲಾಮಯ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವ ಮಾರ್ಚ್‌ 24ರಿಂದ 27ರ ತನಕ ನಡೆಯಲಿದೆ.

ಶಿಲಾಮಯ ಮಹಮ್ಮಾಯಿ ಕಟ್ಟೆ, ದೈವಸ್ಥಾನದಲ್ಲಿ ಮಹಾಮ್ಮಾಯಿ ಹಾಗೂ ಮಹಿಷಂತಾಯ, ಪಿಲಿಚಾಮುಂಡಿ ಧರ್ಮದೈವಗಳ ಪುನ‌ರ್ ಪ್ರತಿಷ್ಠೆ, ನೇಮವು ಐ.ಕೃಷ್ಣ ಅಸ್ರಣ್ಣ ಕುಪ್ಪೆಪದವು ಅವರ ಪೌರೋಹಿತ್ಯದೊಂದಿಗೆ, ವಾಸ್ತುತಜ್ಞ ಬೆಳ್ಳಣ್ಣು ದೊಡ್ಡಮನೆ ಸರ್ವೇಶ್ ತಂತ್ರಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಮಾರ್ಚ್‌ 23ರಂದು ಸಂಜೆ 6ರಿಂದ ಮೊಗ ಒಪ್ಪಿಸುವ, ಕಲಶಾಭಿಷೇಕ, 24ರಂದು ಬೆಳಿಗ್ಗೆ 7.30ರಿಂದ ಹೊರೆಕಾಣಿಕೆ, 8ರಿಂದ ದೇವತಾ ಪ್ರಾರ್ಥನೆ, ಗಣಪತಿಹೋಮ, 9.45ಕ್ಕೆ ಉಗ್ರಾಣ ಮಹೂರ್ತ, ತೋರಣ ಮಹೂರ್ತ, 11ರಿಂದ ಭಜನೆ, ಸಂಜೆ 5ಕ್ಕೆ ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ಸ್ವಾಮೀಜಿಗೆ ಪೂರ್ಣಕುಂಭ ಸ್ವಾಗತ, ಆಶೀರ್ವಚನ, 5.30ಕ್ಕೆ ಶಿಲ್ಪಿಗಳಿಂದ ಆಲಯ ಸ್ವೀಕಾರ, ಸಪ್ತಶುದ್ಧಿ, ವಾಸ್ತು ಪೂಜೆ, ರಾತ್ರಿ 9.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

25ರಂದು ಬೆಳಿಗ್ಗೆ 7ರಿಂದ ಪುಣ್ಯಾಹವಾಚನ, ಮಹಮ್ಮಾಯಿ ಪ್ರತಿಷ್ಠಾ ಹೋಮ, ಕಲಶಾಭಿಷೇಕ, 8ರಿಂದ ಸಾಮೂಹಿಕ ಚಂಡಿಕಾ ಹೋಮ, 9.45ರ ವೃಷಭ ಲಗ್ನದಲ್ಲಿ ಧರ್ಮದೈವ ಮಹಿಷಂತಾಯ, ಪಿಲಿಚಾಮುಂಡಿಯ ಪ್ರತಿಷ್ಠೆ, 10ಕ್ಕೆ ಭಂಡಾರ ಹೊರಡುವುದು, 12ಕ್ಕೆ ಚಂಡಿಕಾ ಹೋಮದ ಪೂರ್ಣಹುತಿ, ಸಂಜೆ 5ರಿಂದ ದುರ್ಗಾನಮಸ್ಕಾರ, 7ರಿಂದ ಮಹಮ್ಮಾಯಿಗೆ ಹೂವಿನ ಪೂಜೆ, ಗೊಂದೋಲು ಸೇವೆ ನಡೆಯಲಿದೆ. 26ರಂದು ಬೆಳಿಗ್ಗೆ ಕಲಶಪೂಜೆ, 10.30ರಿಂದ ದೈವದ ದರ್ಶನ, ಪಲ್ಲಪೂಜೆ, ಮಧ್ಯಾಹ್ನ 1.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 5ರಿಂದ ಧಾರ್ಮಿಕ ಸಭೆ, 7ರಿಂದ ಹೂವಿನ ಪೂಜೆ, 8ರಿಂದ ಮಹಿಷಂತಾಯ ದೈವದ ಗಗ್ಗರ ಸೇವೆ, 10ರಿಂದ ಪಿಲಿಚಾಮುಂಡಿ ದೈವದ ನೇಮ, 27ರಂದು ಭಂಡಾರ ನಿರ್ಗಮನವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT