ಬದಿಯಡ್ಕ: ಕೇರಳ ಪ್ರದೇಶ ಶಾಲಾ ಶಿಕ್ಷಕರ ಅಸೋಸಿಯೇಶನ್ ಆಶ್ರಯದಲ್ಲಿ ಕೇರಳ ರಾಜ್ಯದಾದ್ಯಂತ ಕೇರಳ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ ಗುರುವಾರ ನಡೆಯಿತು.
ಕೇರಳ ಸರ್ಕಾರವು ಶಿಕ್ಷಕರಿಗೆ ವಿರುದ್ಧವಾದ ನಿಲುವುಗಳನ್ನು ಅನುಷ್ಠಾನಗೊಳಿಸುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಮೆರವಣಿಗೆಯ ನೇತೃತ್ವ ವಹಿಸಿದ್ದ ಪ್ರಶಾಂತ್ ಕಾನತ್ತೂರು ಮಾತನಾಡಿ, ‘ಕೇರಳ ರಾಜ್ಯ ಸರ್ಕಾರವು ಶಿಕ್ಷಕ ಪದ್ಧತಿಯನ್ನು ಬುಡಮೇಲು ಮಾಡುತ್ತಿದೆ. ಸರ್ಕಾರದ ವಿರುದ್ಧ ಇತರ ಶಿಕ್ಷಕ ಸಂಘಟನೆಗಳ ಮೌನ ವಿಷಾದನೀಯ’ ಎಂದರು.