<p><strong>ಪುತ್ತೂರು</strong>: ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಪರಿಸರಕ್ಕೆ 4 ತಿಂಗಳ ಬಳಿಕ ಮತ್ತೆ ಕಾಡಾನೆಗಳು ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿವೆ.</p>.<p>ರಾಘವೇಂದ್ರ ಭಟ್, ಗೋಪಾಲಕೃಷ್ಣ ಕಲ್ಲೂರಾಯ, ಕುಮಾರ್ ಪೆರ್ನಾಜೆ ಅವರ ತೋಟಗಳಿಗೆ ಮಂಗಳವಾರ ರಾತ್ರಿ ಆನೆಗಳು ಲಗ್ಗೆಯಿಟ್ಟಿವೆ. ರಾಘವೇಂದ್ರ ಭಟ್ ಅವರ 8 ಅಡಿಕೆ ಮರ, 1 ತೆಂಗಿನ ಮರ ಹಾಗೂ 25ಕ್ಕೂ ಅಧಿಕ ಬಾಳೆಗಿಡಗಳನ್ನು ಮುರಿದು ಹಾಕಿವೆ. ಗೋಪಾಲಕೃಷ್ಣ ಕಲ್ಲೂರಾಯರ ತೋಟದಲ್ಲಿ ತೆಂಗಿನ ಮರವೊಂದನ್ನು ಮುರಿದು ಹಾಕಿವೆ.</p>.<p>ಕುಮಾರ್ ತೋಟದಲ್ಲಿ 1 ತೆಂಗಿನ ಮರ, 2 ಅಡಿಕೆ ಮರ, ಬಾಳೆಗಿಡ, ದೀವಿ ಹಲಸು ಮರಗಳು ಹಾಗೂ ತೋಟದ ಪಕ್ಕದಲ್ಲಿದ್ದ ಈಚಲು ಮರವನ್ನು ಮುರಿದು ತೋಟದ ಕೆರೆಯಲ್ಲಿ ಈಜಾಡಿ ನೂಜಿಬೈಲು, ಅಂಕೋತಿಮಾರು ಕಡೆಗೆ ತೆರಳಿರುವುದಾಗಿ ಮಾಹಿತಿ ಲಭಿಸಿದೆ ಎಂದು ಕುಮಾರ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುತ್ತೂರು</strong>: ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಪರಿಸರಕ್ಕೆ 4 ತಿಂಗಳ ಬಳಿಕ ಮತ್ತೆ ಕಾಡಾನೆಗಳು ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿವೆ.</p>.<p>ರಾಘವೇಂದ್ರ ಭಟ್, ಗೋಪಾಲಕೃಷ್ಣ ಕಲ್ಲೂರಾಯ, ಕುಮಾರ್ ಪೆರ್ನಾಜೆ ಅವರ ತೋಟಗಳಿಗೆ ಮಂಗಳವಾರ ರಾತ್ರಿ ಆನೆಗಳು ಲಗ್ಗೆಯಿಟ್ಟಿವೆ. ರಾಘವೇಂದ್ರ ಭಟ್ ಅವರ 8 ಅಡಿಕೆ ಮರ, 1 ತೆಂಗಿನ ಮರ ಹಾಗೂ 25ಕ್ಕೂ ಅಧಿಕ ಬಾಳೆಗಿಡಗಳನ್ನು ಮುರಿದು ಹಾಕಿವೆ. ಗೋಪಾಲಕೃಷ್ಣ ಕಲ್ಲೂರಾಯರ ತೋಟದಲ್ಲಿ ತೆಂಗಿನ ಮರವೊಂದನ್ನು ಮುರಿದು ಹಾಕಿವೆ.</p>.<p>ಕುಮಾರ್ ತೋಟದಲ್ಲಿ 1 ತೆಂಗಿನ ಮರ, 2 ಅಡಿಕೆ ಮರ, ಬಾಳೆಗಿಡ, ದೀವಿ ಹಲಸು ಮರಗಳು ಹಾಗೂ ತೋಟದ ಪಕ್ಕದಲ್ಲಿದ್ದ ಈಚಲು ಮರವನ್ನು ಮುರಿದು ತೋಟದ ಕೆರೆಯಲ್ಲಿ ಈಜಾಡಿ ನೂಜಿಬೈಲು, ಅಂಕೋತಿಮಾರು ಕಡೆಗೆ ತೆರಳಿರುವುದಾಗಿ ಮಾಹಿತಿ ಲಭಿಸಿದೆ ಎಂದು ಕುಮಾರ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>