ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲಿದ್ದ ರಾಮ ಹೆಗಡೆ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆಯಲ್ಲಿ ಗಣಿತದ ಉಪನ್ಯಾಸಕರಾಗಿ ನಿವೃತ್ತರಾಗಿದ್ದರು. ಇತ್ತೀಚೆಗೆ ಯಕ್ಷರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಯಕ್ಷಗಾನದಲ್ಲಿರುವ ಅನೇಕ ಹಳೆಯ ರಾಗಗಳ ಕುರಿತು ಆಳವಾದ ಅಧ್ಯಯನ ಮಾಡಿದ್ದರು. ಈ ಕುರಿತು ಒಂದು ದೀರ್ಘವಾದ ವಿಡಿಯೊ ಕ್ಯಾಸೆಟ್ ಮಾಡಲು ತಯಾರಿ ಮಾಡಿಕೊಂಡಿದ್ದರು.
ನೃತ್ಯಗಾರರೂ, ಹಾಡುಗಾರರೂ ಆಗಿದ್ದ ರಾಮ ಹೆಗಡೆ ಅವರು ಮೃದಂಗ ವಾದನದಲ್ಲೂ ನಿಪುಣರಾಗಿದ್ದರು.
ಮೃತರ ಅಂತ್ಯಕ್ರಿಯೆಯು ಬುಧವಾರ ಸಂಜೆ ಕೆರೆಮನೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.