‘ಉಪನಿಷತ್ತು ಚಿಂತನೆಗಳು ಮತ್ತು ಕನಕದಾಸರು’, ‘ಕನಕದಾಸರಲ್ಲಿ ಪುರಾಣ ಪ್ರಜ್ಞೆ’, `ದ್ವೈತ-ಅದ್ವೈತ ಚಿಂತನೆಗಳು ಮತ್ತು ಕನಕ’, `ಐತಿಹ್ಯಗಳು ಕಟ್ಟಿಕೊಡುವ ಕನಕದಾಸರ ವ್ಯಕ್ತಿತ್ವ’, `ವಚನ ಸಾಹಿತ್ಯ ಮತ್ತು ಕನಕ’,`ಕನಕದಾಸರ ಕೃತಿಗಳಲ್ಲಿ ಅಭಿವ್ಯಕ್ತಿಗೊಂಡ ವಿಜಯನಗರ ಸಾಮ್ರಾಜ್ಯ’, `ಭಜನೆ ಸಾಹಿತ್ಯ ಮತ್ತು ಕನಕದಾಸರು’, `ಕನಕದಾಸರ ಕೃತಿಗಳಲ್ಲಿ ಆಧುನಿಕತೆಯ ಪರಿಕಲ್ಪನೆ’, `ಅಲ್ಲಮನ ಬೆಡಗಿನ ವಚನಗಳು ಮತ್ತು ಕನಕದಾಸರ ಮುಂಡಿಗೆಗಳು’, `ಕನಕದಾಸರ ಕೃತಿಗಳ ಪ್ರಸ್ತುತತೆ’ (ಯಾವುದಾದರು ಒಂದು ಕೃತಿಯನ್ನು ಅನುಲಕ್ಷಿಸಿ), `ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’, `ಭಕ್ತ ಕನಕದಾಸ -ಸಿನಿಮಾ ವಿಶ್ಲೇಷಣೆ’, `ಕವಿಗಳು ಕಂಡಂತೆ ಕನಕ’ ಮುಂತಾದವುಗಳಲ್ಲಿ ಯಾವುದಾದರು ಒಂದು ವಿಷಯದ ಕುರಿತು 8 ಪುಟ ಮೀರದ ಪ್ರಬಂಧವನ್ನು kanakadasaresearchcenter2008@gmail.comಗೆ ಕಳುಹಿಸಬೇಕು. ಅಂಚೆ ಮೂಲಕ ಸಂಯೋಜಕರು, ಕನಕದಾಸ ಸಂಶೋಧನ ಕೇಂದ್ರ, ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ-574199 ಎಂಬ ವಿಳಾಸಕ್ಕೆ ಕಳುಹಿಸಬಹುದು. ಜುಲೈ 15ರ ಒಳಗೆ ಪ್ರಬಂಧಗಳನ್ನು ಸಲ್ಲಿಸಬೇಕು ಎಂದು ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.