ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಭಾರತೀ: ಪೀಠಾರೋಹಣ ಪೂರ್ವಭಾವಿಯಾಗಿ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಭೇಟಿ

Last Updated 21 ಸೆಪ್ಟೆಂಬರ್ 2020, 9:43 IST
ಅಕ್ಷರ ಗಾತ್ರ

ಮಂಗಳೂರು: ಎಡನೀರು ಮಠದ ನೂತನ ಉತ್ತರಾಧಿಕಾರಿಯಾಗಿ ಇದೇ 28 ರಂದು ಪೀಠಾರೋಹಣ ಮಾಡಲಿರುವ ಸಚ್ಚಿದಾನಂದ ಭಾರತೀ ಅವರು ಪೀಠಾರೋಹಣ ಪೂರ್ವಭಾವಿಯಾಗಿ ನಡೆಸುವ ವಿವಿಧ ಪುಣ್ಯಕ್ಷೇತ್ರ ದರ್ಶನದ ಅಂಗವಾಗಿ ಸೋಮವಾರ ಅಡೂರು ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಬಂದು ಯಾತ್ರೆಯನ್ನು ಆರಂಭಿಸಿದರು.

ಪ್ರಸಾದ ಭಾರಿತ್ತಾಯರು ಅವರನ್ನು ಸ್ವಾಗತಿಸಿದರು. ಶಿವಳ್ಳಿ ಬ್ರಾಹ್ಮಣ ಸಭಾದ ಮುಖಂಡರಾದ ಕೋಟೆಗದ್ದೆ ದಿನೇಶ್ ಕುಮಾರ್ ಅಡಿಗ, ಸತ್ಯಪ್ರೇಮಾ ಭಾರಿತ್ತಾಯ, ಪ್ರಕಾಶ್ ಪಾಂಙಣ್ಣಾಯ, ಅನಿಲ್ ಕುಮಾರ್ ಸರಳಾಯ, ಕ್ಷೇತ್ರದ ಸಿಬ್ಬಂದಿ ಗಂಗಾಧರ್ ರಾವ್ ಹಾಗೂ ಕ್ಷೇತ್ರದ ಆಡಳಿತ ಸಮಿತಿ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT