ಮಂಗಳೂರು: ಎಡನೀರು ಮಠದ ನೂತನ ಉತ್ತರಾಧಿಕಾರಿಯಾಗಿ ಇದೇ 28 ರಂದು ಪೀಠಾರೋಹಣ ಮಾಡಲಿರುವ ಸಚ್ಚಿದಾನಂದ ಭಾರತೀ ಅವರು ಪೀಠಾರೋಹಣ ಪೂರ್ವಭಾವಿಯಾಗಿ ನಡೆಸುವ ವಿವಿಧ ಪುಣ್ಯಕ್ಷೇತ್ರ ದರ್ಶನದ ಅಂಗವಾಗಿ ಸೋಮವಾರ ಅಡೂರು ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಬಂದು ಯಾತ್ರೆಯನ್ನು ಆರಂಭಿಸಿದರು.
ಪ್ರಸಾದ ಭಾರಿತ್ತಾಯರು ಅವರನ್ನು ಸ್ವಾಗತಿಸಿದರು. ಶಿವಳ್ಳಿ ಬ್ರಾಹ್ಮಣ ಸಭಾದ ಮುಖಂಡರಾದ ಕೋಟೆಗದ್ದೆ ದಿನೇಶ್ ಕುಮಾರ್ ಅಡಿಗ, ಸತ್ಯಪ್ರೇಮಾ ಭಾರಿತ್ತಾಯ, ಪ್ರಕಾಶ್ ಪಾಂಙಣ್ಣಾಯ, ಅನಿಲ್ ಕುಮಾರ್ ಸರಳಾಯ, ಕ್ಷೇತ್ರದ ಸಿಬ್ಬಂದಿ ಗಂಗಾಧರ್ ರಾವ್ ಹಾಗೂ ಕ್ಷೇತ್ರದ ಆಡಳಿತ ಸಮಿತಿ ಸದಸ್ಯರು ಭಾಗವಹಿಸಿದ್ದರು.