ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಪ್ಪಾಡಿ: ಸೇತುವೆ ಕುಸಿತ- ಏಳು ಮಂದಿಗೆ ಗಾಯ

Published 15 ಏಪ್ರಿಲ್ 2024, 12:52 IST
Last Updated 15 ಏಪ್ರಿಲ್ 2024, 12:52 IST
ಅಕ್ಷರ ಗಾತ್ರ

ವಿಟ್ಲ(ದಕ್ಷಿಣ ಕನ್ನಡ): ಪುಣಚ ಗ್ರಾಮದ ಬರೆಂಜ - ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು 7ಮಂದಿ ಸೋಮವಾರ ಗಾಯಗೊಂಡಿದ್ದಾರೆ

ಸೇತುವೆಯ ಕೊನೆಯ ಹಂತದ ಕಾರ್ಯ ನಡೆಯುತ್ತಿತ್ತು. ಕಾಂಕ್ರೀಟ್ ಮಿಕ್ಸ್ ತುಂಬಿಸುವಾಗ ಈ ಅವಘಡ ಸಂಭವಿಸಿದೆ. ತಳಭಾಗದಲ್ಲಿ ಕಟ್ಡಿದ್ದ ಕಬ್ಬಿಣದ ರಾಡ್ ಗಳು ಜಾರಿದ್ದು, ಮೇಲ್ಭಾಗದ ಸಂಪೂರ್ಣ ಕಾಂಕ್ರೀಟ್ ಕುಸಿದಿತ್ತು. ಗಾಯಗೊಂಡ ಆರು ಮಂದಿಯನ್ನು ತಕ್ಷಣ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು‌ ಕಬ್ಬಿಣದ ಸಾಮಾಗ್ರಿಗಳ ನಡುವಿನಲ್ಲಿ ಕಾರ್ಮಿಕರೊಬ್ಬರು ಸಿಲುಕಿದ್ದರು. ಅವರನ್ನು ಹೊರ ತೆಗೆಯಲು ಸುಮಾರು ಅರ್ಧ ತಾಸು ಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT