ಪ್ರಸಕ್ತ ವರ್ಷ ಕಲ್ಯಾಣ ಕರ್ನಾಟಕದ ವ್ಯಾಪ್ತಿಯಲ್ಲಿ ಹೈನೋದ್ಯಮ ಬಲವರ್ಧನೆಗೆ ಒತ್ತು ನೀಡಲಾಗುತ್ತಿದೆ. ಇಡೀ ರಾಜ್ಯದಲ್ಲಿ ಹೈನುಗಾರಿಕೆಯೊಂದಿಗೆ ಸಾವಯವ ಕೃಷಿ, ನೀರಾವರಿ, ಸಮಗ್ರ ತೋಟಗಾರಿಗೆ, ಕೃಷಿ ಸ್ವ-ಉದ್ಯೋಗ, ಭತ್ತ ಯಾಂತ್ರೀಕರಣ, ಸಿರಿಧಾನ್ಯ ಬೇಸಾಯ, ನರ್ಸರಿ ರಚನೆ, ಜಲಾನಯನ ಮಾದರಿಗಳು, ಪರಿಸರ ಮಾಹಿತಿ ಜಾಗೃತಿ ಶಿಬಿರ, ಶಾಲಾ ಪರಿಸರ ಜಾಗೃತಿ ಮಾಹಿತಿ ಶಿಬಿರಗಳನ್ನು ಆಯೋಜಿಸಲು ಕಾರ್ಯಯೋಜನೆ ರೂಪಿಸಲಾಗಿದೆ.