‘ಪ್ರಜಾವಾಣಿ’ಯ ಶುಕ್ರವಾರದ ಸಂಚಿಕೆಯಲ್ಲಿ ಪ್ರಕಟವಾದ ‘36 ಕಡೆ ಕಾಲುಸಂಕ: ಕಾಮಗಾರಿ ಪ್ರಗತಿ’ ವಿಶೇಷ ವರದಿಯ ತುಣುಕನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ‘ಕಾಲುಸಂಕ ದಾಟುತ್ತಿದ್ದ ವೇಳೆ ಶಾಲಾ ಬಾಲಕಿಯೊಬ್ಬಳು ತೊರೆಗೆ ಬಿದ್ದು ಮೃತಪಟ್ಟ ಸುದ್ದಿ ಅಂದು ನನ್ನ ಮನ ಕಲಕಿತ್ತು. ಮಲೆನಾಡು, ಕರಾವಳಿಯಲ್ಲಿ ಈ ಸಮಸ್ಯೆ ನಿವಾರಿಸಲು ಅಂದು ಬಜೆಟ್ನಲ್ಲಿ ‘ಶಾಲಾ ಸಂಪರ್ಕ ಸೇತು’ ಯೋಜನೆ ಘೋಷಿಸಿದ್ದೆ. ಅದು ಯಶಸ್ವಿಯಾಗಿದೆ. ವಿದ್ಯಾರ್ಥಿಗಳಿಗೆ ನೆರವಾಗಿದೆ’ ಎಂದಿದ್ದಾರೆ.