2023–24ನೇ ಸಾಲಿನಲ್ಲಿ ಪುನಃ ಹಿಂದಿನಂತೆ ಒಬ್ಬರ ರೈತನ ಎಷ್ಟೇ ಸರ್ವೆ ಸಂಖ್ಯೆ ಹೊಂದಿದ್ದರೂ, ಅದನ್ನು ಒಬ್ಬ ರೈತನ ಲೆಕ್ಕದಲ್ಲಿ ಪರಿಗಣಿಸಲಾಗುತ್ತಿದೆ. ಈ ಬಾರಿ ಅಡಿಕೆಗೆ 72,915 ರೈತರು ಒಟ್ಟು ₹27.79 ಕೋಟಿ, ಕಾಳುಮೆಣಸಿಗೆ 21,055 ರೈತರು ಒಟ್ಟು ₹2.78 ಕೋಟಿ ಮೊತ್ತದ ವಿಮೆ ಕಂತು ಪಾವತಿಸಿದ್ದಾರೆ. 2022–23ನೇ ಸಾಲಿನಲ್ಲಿ ಒಟ್ಟು 1,10,126 ಪ್ರಕರಣಗಳಿಗೆ ವಿಮೆ ಪಾವತಿಸಲಾಗಿತ್ತು ಎಂದು ಅಧಿಕಾರಿ ವಿವರಿಸಿದರು.