‘ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಕಂಡಿದ್ದು ಬರೀ ಮೋಸ. ಲೀಟರ್ಗೆ ₹ 56 ಇದ್ದ ಪೆಟ್ರೋಲ್ ದರ ಈಗ ₹ 98ಕ್ಕೆ ಏರಿದೆ. ಒಂದು ವಸ್ತುವನ್ನೂ ಬಿಡದೇ ಜಿಎಸ್ಟಿನ್ನು ವಿಧಿಸಲಾಗುತ್ತಿದೆ. ವಿದೇಶಿ ಬ್ಯಾಂಕ್ಗಳಿಂದ ಕಪ್ಪುಹಣ ವಾಪಾಸ್ ತಂದು ಜನಧನ ಖಾತೆಗೆ ₹ 15 ಲಕ್ಷ ಹಂಚುವ ಭರವಸೆಯನ್ನೂ ಈಡೇರಿಸಿಲ್ಲ. ನೋಟು ರದ್ಧತಿಯಿಂದ ಜನ ಸಮಸ್ಯೆ ಎದುರಿಸಿದರು. ₹ 2ಸಾವಿರ ಮುಖಬೆಲೆಯ ನೋಟು ಮುದ್ರಿಸಿ, ಮೂರೇ ವರ್ಷದಲ್ಲಿ ಹಿಂಪಡೆದರು. ಚುನಾವಣಾ ಬಾಂಡ್ನಲ್ಲೂ ವ್ಯವಸ್ಥಿತ ಭ್ರಷ್ಟಾಚಾರ ನಡೆಸಿದ್ದಾರೆ. ಜನ ಎಚ್ಚೆತ್ತುಕೊಂಡಿದ್ದು, ಅವರ ಮೋಸಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.