ಸಂಪನ್ಮೂಲ ವ್ಯಕ್ತಿಯಾಗಿದ್ದ ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರ ವಿಜ್ಞಾನಿ ಡಾ. ನವೀನ್ ಕುಮಾರ್ ಮಾತನಾಡಿ, ಎರೆಹುಳುಗಳು ಮಣ್ಣಿನಲ್ಲಿರುವ ತ್ಯಾಜ್ಯಗಳನ್ನು ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುತ್ತವೆ. ನೀರನ್ನು ಭೂಮಿಗೆ ಇಂಗುವಂತೆಯೂ ಮಾಡುತ್ತವೆ. ವಿಶೇಷವಾಗಿ 17 ರೀತಿಯ ಪೋಷಕಾಂಶಗಳು ಎರೆಗೊಬ್ಬರದಲ್ಲಿವೆ. ಕೃಷಿಕರು ಸಣ್ಣ ತೊಟ್ಟಿಗಳನ್ನು ರಚಿಸಿಕೊಂಡು ಸಾವಯವ ಎರೆಗೊಬ್ಬರ ತಯಾರಿಸಿ, ಬಳಸಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.