<p>ವಿಟ್ಲ: ಜಾಗದ ವಿವಾದವೊಂದು ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿರುವ ಮಧ್ಯೆ ಕಂದಾಯ ಇಲಾಖೆ ಕೃಷಿಭೂಮಿಯ ಬೆಳೆ ನಾಶಪಡಿಸಿದ ಘಟನೆ ವಿಟ್ಲ ಸಮೀಪದ ಅನಿಲಕಟ್ಟೆ ಸುರಂಗದಮೂಲೆ ಎಂಬಲ್ಲಿ ಗುರುವಾರ ನಡೆದಿದೆ. <br /> <br /> ವಿಟ್ಲ ಸಮೀಪದ ಅನಿಲಕಟ್ಟೆ ಸುರಂಗದಮೂಲೆ ದಿ.ರಾಮಣ್ಣ ಗೌಡ ಮತ್ತು ಮೀನಾಕ್ಷಿ ದಂಪತಿ ಪುತ್ರ ಹೊನ್ನಪ್ಪ ಗೌಡ, ಗೋಪಾಲಕೃಷ್ಣ ಎಂಬವರ ಸ.ನಂ. 535/3ಎಯಲ್ಲಿ 45 ಸೆಂಟ್ಸ್ ಕೃಷಿ ಭೂಮಿ ನಾಶಗೊಂಡಿದೆ.<br /> <br /> ಇವರ ವರ್ಗ ಸ್ಥಳದಲ್ಲಿರುವ ಸುಮಾರು 100 ಅಡಿಕೆ ಮರ, 33 ತೆಂಗು, ಹಲವಾರು ಬಾಳೆ ಗಿಡಗಳನ್ನು ಇಲಾಖೆ ನಾಶ ಮಾಡಿದೆ. ನೀರಾವರಿ ಪೈಪ್ಲೈನ್ ಧ್ವಂಸಗೊಂಡಿದೆ. <br /> <br /> ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಜಾಗದ ಅಳತೆ ಮಾಡದೆ ದಿಢೀರನೇ ಸ್ಥಳಕ್ಕಾಗಮಿಸಿ ಹಿಟಾಚಿ ಯಂತ್ರವನ್ನು ಬಳಸಿ ಬೆಳೆನಾಶ ಮಾಡಿದ್ದಾರೆ. ಪಕ್ಕದಲ್ಲೇ ಇರುವ ಸರ್ಕಾರಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳದೆ ರಾಜಕೀಯ ಒತ್ತಡದಿಂದ ಅನ್ಯಾಯವೆಸಗಿದ್ದಾರೆ. ಇಲಾಖಾಧಿಕಾರಿಗಳು ಚೇಲಾಗಳಂತೆ ವರ್ತಿಸಿದ್ದಾರೆ ಎಂದು ಅವರು ಅಳಲು ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಟ್ಲ: ಜಾಗದ ವಿವಾದವೊಂದು ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿರುವ ಮಧ್ಯೆ ಕಂದಾಯ ಇಲಾಖೆ ಕೃಷಿಭೂಮಿಯ ಬೆಳೆ ನಾಶಪಡಿಸಿದ ಘಟನೆ ವಿಟ್ಲ ಸಮೀಪದ ಅನಿಲಕಟ್ಟೆ ಸುರಂಗದಮೂಲೆ ಎಂಬಲ್ಲಿ ಗುರುವಾರ ನಡೆದಿದೆ. <br /> <br /> ವಿಟ್ಲ ಸಮೀಪದ ಅನಿಲಕಟ್ಟೆ ಸುರಂಗದಮೂಲೆ ದಿ.ರಾಮಣ್ಣ ಗೌಡ ಮತ್ತು ಮೀನಾಕ್ಷಿ ದಂಪತಿ ಪುತ್ರ ಹೊನ್ನಪ್ಪ ಗೌಡ, ಗೋಪಾಲಕೃಷ್ಣ ಎಂಬವರ ಸ.ನಂ. 535/3ಎಯಲ್ಲಿ 45 ಸೆಂಟ್ಸ್ ಕೃಷಿ ಭೂಮಿ ನಾಶಗೊಂಡಿದೆ.<br /> <br /> ಇವರ ವರ್ಗ ಸ್ಥಳದಲ್ಲಿರುವ ಸುಮಾರು 100 ಅಡಿಕೆ ಮರ, 33 ತೆಂಗು, ಹಲವಾರು ಬಾಳೆ ಗಿಡಗಳನ್ನು ಇಲಾಖೆ ನಾಶ ಮಾಡಿದೆ. ನೀರಾವರಿ ಪೈಪ್ಲೈನ್ ಧ್ವಂಸಗೊಂಡಿದೆ. <br /> <br /> ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಜಾಗದ ಅಳತೆ ಮಾಡದೆ ದಿಢೀರನೇ ಸ್ಥಳಕ್ಕಾಗಮಿಸಿ ಹಿಟಾಚಿ ಯಂತ್ರವನ್ನು ಬಳಸಿ ಬೆಳೆನಾಶ ಮಾಡಿದ್ದಾರೆ. ಪಕ್ಕದಲ್ಲೇ ಇರುವ ಸರ್ಕಾರಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳದೆ ರಾಜಕೀಯ ಒತ್ತಡದಿಂದ ಅನ್ಯಾಯವೆಸಗಿದ್ದಾರೆ. ಇಲಾಖಾಧಿಕಾರಿಗಳು ಚೇಲಾಗಳಂತೆ ವರ್ತಿಸಿದ್ದಾರೆ ಎಂದು ಅವರು ಅಳಲು ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>