ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಕಾಲೇಜಿನ ಪ್ರಾಂಶು ಪಾಲ ಡಾ.ಎ.ಆರ್.ಶಬರಾಯ ಮಾತನಾಡಿ, ಯಶಸ್ಸೆಂಬ ಸಾಗರ ದಾಟಿ, ಜಯಿಸುವ ದೃಢ ಛಲವನ್ನು ವಿದ್ಯಾರ್ಥಿಗಳು ಹೊಂದಬೇಕು. ಸಮಾಜದಲ್ಲಿ ದೃಢ ಆತ್ಮವಿಶ್ವಾಸದಿಂದ ಸವಾಲು ಎದುರಿಸಿ, ವಿದ್ಯಾರ್ಥಿಗಳು ಔಷಧೀಯ ತಂತ್ರಜ್ಞಾನದ ಧ್ಯೇಯವನ್ನು ಎತ್ತಿ ಹಿಡಿಯಬೇಕು ಎಂದು ತಿಳಿಸಿದರು.