ಮೂಡುಬಿದಿರೆ: ಸ್ವರಾಜ್ಯ ಮೈದಾನ ದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾ ಣವಾಗುತ್ತಿರುವ ಪುರಸಭೆಯ ತಾತ್ಕಾಲಿಕ ಮಾರುಕಟ್ಟೆ ಕಾಮಗಾರಿಯನ್ನು ಶನಿವಾರ ಮಧ್ಯಾಹ್ನದಿಂದ ನಿಲ್ಲಿಸಲಾಗಿದೆ.
ಶನಿವಾರ ಕೋರ್ಟ್ ಆದೇಶ ಕೈ ಸೇರಿದ ಮೇರೆಗೆ ತಹಶೀಲ್ದಾರ್ ಮಹಮ್ಮದ್ ಇಸಾಕ್ ಅವರು ಪೊಲೀಸ ರೊಂದಿಗೆ ಶನಿವಾರ ಮಧ್ಯಾಹ್ನ ಸ್ವರಾಜ್ಯ ಮೈದಾನಕ್ಕೆ ತೆರಳಿ, ಕಾಮಗಾರಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿದರು. ಇದರಿಂದ ಕಾಮಗಾರಿ ಸ್ಥಗಿತಗೊಂಡಿದೆ.
ಆರು ವಾರ ಯಥಾಸ್ಥಿತಿಗೆ ಆದೇಶ: ರಕ್ಷಣಾ ಇಲಾಖೆಗೆ ಸೇರಿದ ಸುಮಾರು 28 ಎಕರೆ ವಿಸ್ತೀರ್ಣದ ಸ್ವರಾಜ್ಯ ಮೈದಾನವನ್ನು ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯದೆ ಜಿಲ್ಲಾಧಿಕಾರಿ ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದನ್ನು ಸುದರ್ಶನ್ ಎಂ., ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಈ ಕುರಿತು ಆದೇಶ ನೀಡಿರುವ ಹೈಕೋರ್ಟ್, 6 ವಾರಗಳವರೆಗೆ ಸ್ವರಾಜ್ಯ ಮೈದಾನದಲ್ಲಿ ಯಾವುದೇ ಕಾಮಗಾರಿ ಗಳನ್ನು ನಡೆಸದಂತೆ ಆದೇಶಿಸಿದ್ದು, ಅಲ್ಲಿಯವರೆಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಸೂಚಿಸಿದೆ.