ಇದನ್ನು ಮುಚ್ಚುವಂತೆ ಅರಣ್ಯ ಇಲಾಖೆ ಮೇಲೆ ಒತ್ತಡ ಹೇರಿರುವುದು ಮತ್ತು ಇಲಾಖೆ ಅಧಿಕಾರಿಗೆ ಈ ಕಾಲೊನಿಗೆ ಬೇರೆ ರಸ್ತೆ ಇದೆ ಎಂದು ಸುಳ್ಳು ಮಾಹಿತಿ ನೀಡಿ ಸಂಪರ್ಕಕ್ಕೆ ಅಡ್ಡಿ ಮಾಡಿರುವುದು ಖಂಡನೀಯ ಎಂದರು.
ಕಾನೂನುಬದ್ಧ ಹಕ್ಕಾದ ರಸ್ತೆ ಒದಗಿಸಬೇಕಾದ ಚುನಾಯಿತ ಜನಪ್ರತಿನಿಧಿಗಳು ಈ ರೀತಿ ವರ್ತಿಸಿರುವುದು ಸರಿಯಲ್ಲ. ಇದು ಜನತೆಗೆ ಮಾಡಿದ ದ್ರೋಹ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿ ಸದಸ್ಯರಾದ ದೇಜಪ್ಪ ಮಲೆ, ಗುಂಡಪ್ಪ ಮಲೆ, ಚಂದ್ರಶೇಖರ, ಅಪ್ಪಯ್ಯ, ಶಿವಪ್ಪ ಮಲೆ, ಜಯಪ್ರಕಾಶ್ ಕೂಜುಗೋಡು ಇದ್ದರು.