‘ಮಕರ ಸಂಕ್ರಮಣದಂದು ಉತ್ತರ ನಕ್ಷತ್ರ ಬರುತ್ತದೆ. ಆದರೆ ಅಂದು ಬೆಳಗುವ ಜ್ಯೋತಿ ಮಾತ್ರ ಕರ್ಪೂರದಿಂದ ಹಚ್ಚಲಾಗುತ್ತಿದೆ. ಮದುವೆಯಾದ ನೂತನ ದಂಪತಿಗೆ ಮಧ್ಯಾಹ್ನ ಅರುಂಧತಿ ನಕ್ಷತ್ರ ತೋರಿಸತ್ತಾರಲ್ಲ ಇದು ಹಾಗೆ?. ಇದೊಂದು ನಂಬಿಕೆಯಾಗಿದ್ದು, ಸಾಂಕೇತಿಕವಾಗಿ ನೋಡಬೇಕು ಅಷ್ಟೇ. ಹಿಂದೂಗಳನ್ನು ಇಟ್ಟುಕೊಂಡು ರಾಜಕಾರಣಿಗಳು ಆಟವಾಡುತ್ತಿದ್ದಾರೆ. ಅನ್ಯ ಧರ್ಮಗಳ ಬಗ್ಗೆಯೂ ಮಾತನಾಡಲಿ ನೋಡೋಣ. ಮುಸ್ಲಿಂ, ಕ್ರೈಸ್ತ ಧರ್ಮಗಳಲ್ಲಿರುವ ಅಜ್ಞಾನಗಳ ಬಗ್ಗೆ ಏಕೆ ಯಾರೂ ಮಾತನಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.