ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆ: ವ್ಯಕ್ತಿ ಸಾವು

Last Updated 30 ಮಾರ್ಚ್ 2020, 17:16 IST
ಅಕ್ಷರ ಗಾತ್ರ

ದಾವಣಗೆರೆ: ತಾಲ್ಲೂಕಿನ ಗೋಪನಾಳ್‌ ಗ್ರಾಮದಲ್ಲಿ ಮಹಿಳೆಯನ್ನು ಬೈಕಲ್ಲಿ ಕೂರಿಸಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿದಂತೆ ಉಂಟಾದ ಜಗಳವನ್ನು ಬಿಡಿಸಲು ಹೋದ ವ್ಯಕ್ತಿ ಹಲ್ಲೆಯಿಂದ ಮೃತಪಟ್ಟಿದ್ದಾರೆ.

ಗೋಪನಾಳ್‌ ಷರೀಫ್‌ಸಾಬ್‌ (45) ಮೃತಪಟ್ಟವರು. ಅವರ ತಮ್ಮ ಬಷೀರ್‌ಸಾಬ್‌ ತನ್ನ ಬೈಕಲ್ಲಿ ಭಾನುವಾರ ಹೋಗುತ್ತಿದ್ದಾಗ ಗ್ರಾಮದ ಮಹಿಳೆಯೊಬ್ಬರು ಬೈಕ್‌ ನಿಲ್ಲಿಸುವಂತೆ ಕೈ ಸನ್ನೆ ಮಾಡಿ ಬಟ್ಟೆ ತೊಳೆಯಲು ಚಾನಲ್‌ವರೆಗೆ ಬಿಡುವಂತೆ ಕೇಳಿಕೊಂಡಿದ್ದರು. ಬಷೀರ್‌ಸಾಬ್‌ ಬೈಕಲ್ಲಿ ಕೊಂಡೋಗಿ ಬಿಟ್ಟಿದ್ದರು. ಇದು ವಿವಾದವಾಗಿ ರವಿ, ರಮೇಶ ಅವರು ಬಂದು ಬಷೀರ್‌ಸಾಬ್‌ಗೆ ಹಲ್ಲೆ ನಡೆಸಿದ್ದರು. ಜಗಳವನ್ನು ನಿಲ್ಲಿಸಲು ಹೋದ ಷರೀಫ್‌ಸಾಬ್‌ಗೂ ಹೊಡೆದಿದ್ದಾರೆ. ಗಂಭೀರ ಗಾಯಗೊಂಡ ಷರೀಫ್‌ಸಾಬ್‌ ಮೃತಪಟ್ಟಿದ್ದಾರೆ. ಷರೀಫ್‌ ಸಾಬ್ ಅವರ ಪತ್ನಿ ಜಾಯಿದಾ ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT