ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ತಾನು, ತಾನಾದ ಮೇಲೆ ಮಕ್ಕಳು; ನಂತರ ಮೊಮ್ಮಕ್ಕಳನ್ನು ರಾಜಕಾರಣಕ್ಕೆ ತರಲಾಗುತ್ತಿದೆ. ಮೊನ್ನೆ ದೇವೇಗೌಡರು, ಅವರ ಪಕ್ಕದಲ್ಲಿ ಮೊಮ್ಮಗ, ಭವಾನಿ ರೇವಣ್ಣ, ರೇವಣ್ಣ ಅಳುವುದನ್ನು ಟಿವಿಯಲ್ಲಿ ನೋಡಿದೆ. ಕಣ್ಣೀರಧಾರೆ ಹರಿಯುತ್ತಿತ್ತು. ಈ ಬಿಸಿಲಿನಲ್ಲಿ ಕಾವೇರಿಯಲ್ಲಾದರೂ ನೀರು ಬತ್ತಿ ಹೋದೀತು; ಆದರೆ, ಈ ಅಪ್ಪ–ಮಕ್ಕಳ ಕಣ್ಣಲ್ಲಿ ಯಾವಾಗಲೂ ನೀರು ಬತ್ತುವುದಿಲ್ಲ. ಯಾವಾಗ ಬೇಕಾದರೂ ಅದು ಬರುತ್ತದೆ. ದಾವಣಗೆರೆಯ ನಲ್ಲಿಯ ನೀರು ಬಂದಾದೀತು ಹೊರತು ಅವರ ಕಣ್ಣಲ್ಲಿ ನೀರು ಬಂದಾಗುವುದಿಲ್ಲ’ ಎಂದು ಲೇವಡಿ ಮಾಡಿದರು.