<p><strong>ಮಲೇಬೆನ್ನೂರು: ‘</strong>ಗ್ರಾಹಕರು ಯಾವುದೇ ತರಹದ ಅನುಮಾನಾಸ್ಪದ ದೂರವಾಣಿ ಕರೆ, ಸಂದೇಶ ಅಥವಾ ಲಿಂಕ್ ಕಂಡುಬಂದರೆ, ಎಚ್ಚರಿಕೆ ವಹಿಸಿ ವ್ಯವಹರಿಸಬೇಕುʼ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಕೆ.ವಿ. ಕಾಮತ್ ಸಲಹೆ ನೀಡಿದರು.</p>.<p>ಸಮೀಪದ ದೇವರಬೆಳಕೆರೆ ಶಾಖೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಣಕಾಸು ಸಾಕ್ಷರತಾ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.</p>.<p>ಬ್ಯಾಂಕಿಂಗ್ ವಂಚನೆಗಳನ್ನು ತಡೆಯುವ ಕ್ರಮಗಳ ಕುರಿತು ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡಲಾಯಿತು.</p>.<p>ಖಾತೆ ವಿವರಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವ ಅಗತ್ಯ ಮತ್ತು ವಂಚಕರು ಖಾತೆ ದುರುಪಯೋಗಪಡಿಸಿಕೊಳ್ಳುವ ಅಪಾಯಗಳ ಬಗ್ಗೆ ಆರ್ಬಿಐ ಪ್ರತಿನಿಧಿ ಗೌತಮ್ ತಿಳಿಸಿದರು.</p>.<p>ವಂಚಕರ ಜಾಲ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಬಗ್ಗೆ ಜಾಗೃತರಾಗರಬೇಕು. ಯಾವುದೇ ತರಹದ ಅನುಮಾನ ಇದ್ದರೆ, ನೇರವಾಗಿ ಶಾಖೆಗಳಿಗೆ ಹೋಗಿ ವ್ಯವಹರಿಸಬೇಕು ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಪಿ. ಹಿರೇಮಠ್ ಹೇಳಿದರು.</p>.<p>ಶಾಖಾ ವ್ಯವಸ್ಥಾಪಕ ಜಗದೀಶ್ ಸಿಂಹಾಸನ, ಪಿಡಿಒ ಭಾಸ್ಕರ್ ಮಾರ್ಗದರ್ಶನ ನೀಡಿದರು. ಸಂಜೀವ್, ದೀಪಕ್, ಮನೋಜ್, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ್ ಅರ್ಕಾಚಾರಿ, ವಿವಿಧ ಬ್ಯಾಂಕ್ಗಳ ಸಿಬ್ಬಂದಿ ಹಾಗೂ ಗ್ರಾಹಕರು ಇದ್ದರು.</p>.<p>ಪಿಎಂ ವಿಮಾ ಯೋಜನೆಯಡಿ ಫಲಾನುಭವಿಗೆ ₹2 ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು: ‘</strong>ಗ್ರಾಹಕರು ಯಾವುದೇ ತರಹದ ಅನುಮಾನಾಸ್ಪದ ದೂರವಾಣಿ ಕರೆ, ಸಂದೇಶ ಅಥವಾ ಲಿಂಕ್ ಕಂಡುಬಂದರೆ, ಎಚ್ಚರಿಕೆ ವಹಿಸಿ ವ್ಯವಹರಿಸಬೇಕುʼ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಕೆ.ವಿ. ಕಾಮತ್ ಸಲಹೆ ನೀಡಿದರು.</p>.<p>ಸಮೀಪದ ದೇವರಬೆಳಕೆರೆ ಶಾಖೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಣಕಾಸು ಸಾಕ್ಷರತಾ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.</p>.<p>ಬ್ಯಾಂಕಿಂಗ್ ವಂಚನೆಗಳನ್ನು ತಡೆಯುವ ಕ್ರಮಗಳ ಕುರಿತು ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡಲಾಯಿತು.</p>.<p>ಖಾತೆ ವಿವರಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವ ಅಗತ್ಯ ಮತ್ತು ವಂಚಕರು ಖಾತೆ ದುರುಪಯೋಗಪಡಿಸಿಕೊಳ್ಳುವ ಅಪಾಯಗಳ ಬಗ್ಗೆ ಆರ್ಬಿಐ ಪ್ರತಿನಿಧಿ ಗೌತಮ್ ತಿಳಿಸಿದರು.</p>.<p>ವಂಚಕರ ಜಾಲ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಬಗ್ಗೆ ಜಾಗೃತರಾಗರಬೇಕು. ಯಾವುದೇ ತರಹದ ಅನುಮಾನ ಇದ್ದರೆ, ನೇರವಾಗಿ ಶಾಖೆಗಳಿಗೆ ಹೋಗಿ ವ್ಯವಹರಿಸಬೇಕು ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಪಿ. ಹಿರೇಮಠ್ ಹೇಳಿದರು.</p>.<p>ಶಾಖಾ ವ್ಯವಸ್ಥಾಪಕ ಜಗದೀಶ್ ಸಿಂಹಾಸನ, ಪಿಡಿಒ ಭಾಸ್ಕರ್ ಮಾರ್ಗದರ್ಶನ ನೀಡಿದರು. ಸಂಜೀವ್, ದೀಪಕ್, ಮನೋಜ್, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ್ ಅರ್ಕಾಚಾರಿ, ವಿವಿಧ ಬ್ಯಾಂಕ್ಗಳ ಸಿಬ್ಬಂದಿ ಹಾಗೂ ಗ್ರಾಹಕರು ಇದ್ದರು.</p>.<p>ಪಿಎಂ ವಿಮಾ ಯೋಜನೆಯಡಿ ಫಲಾನುಭವಿಗೆ ₹2 ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>