<p><strong>ದಾವಣಗೆರೆ:</strong> ಜಿಲ್ಲೆಯಲ್ಲಿ 450 ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ನಾಲ್ವರು ಮೃತಪಟ್ಟಿದ್ದಾರೆ. 107 ಮಂದಿ ಗುಣಮುಖರಾಗಿದ್ದಾರೆ.</p>.<p>ಆರೋಗ್ಯ ಇಲಾಖೆ ನೌಕರರ ಮುಷ್ಕರ ಹಾಗೂ ತಾಂತ್ರಿಕ ದೋಷದಿಂದ ಒಂದು ವಾರದಿಂದ ಬಾಕಿ ಇದ್ದ ಪ್ರಕರಣಗಳು ಶುಕ್ರವಾರ ಸೇರ್ಪಡೆಯಾಗಿವೆ.</p>.<p>ಜಗಳೂರು ತಾಲ್ಲೂಕಿನ ಬಸವನಕೋಟೆಯ 56 ವರ್ಷದ ಮಹಿಳೆ ಅಕ್ಟೋಬರ್ 4 ಹಾಗೂ ಜಗಳೂರು ಪಟ್ಟಣದ 57 ವರ್ಷದ ಪುರುಷ ಅಕ್ಟೋಬರ್ 8ರಂದು ಮೃತಪಟ್ಟಿದ್ದಾರೆ. ಹರಿಹರ ತಾಲ್ಲೂಕಿನ ಸಾಲೆಕಟ್ಟೆ 60 ವರ್ಷದ ಪುರುಷ ಹಾಗೂ ದಿಟೂರಿನ 55 ವರ್ಷದ ಪುರುಷ ಅಕ್ಟೋಬರ್ 8ರಂದು ಮೃತಪಟ್ಟಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 247 ಮಂದಿ ಮೃತಪಟ್ಟಿದ್ದಾರೆ.</p>.<p>ದಾವಣಗೆರೆ ನಗರ ಹಾಗೂ ತಾಲ್ಲೂಕಿನಲ್ಲಿ 178, ಹರಿಹರ ತಾಲ್ಲೂಕಿನ 72, ಜಗಳೂರು ತಾಲ್ಲೂಕಿನ 56, ಚನ್ನಗಿರಿ ತಾಲ್ಲೂಕಿನ 65, ಹೊನ್ನಾಳಿ ತಾಲ್ಲೂಕಿನ 76 ಹಾಗೂ ಹೊರ ಜಿಲ್ಲೆಯ ಮೂವರಿಗೆ ಕೋವಿಡ್–19 ದೃಢಪಟ್ಟಿದೆ.</p>.<p>ಬಿಡುಗಡೆಗೊಂಡವರಲ್ಲಿ ದಾವಣಗೆರೆ ನಗರ ಹಾಗೂ ತಾಲ್ಲೂಕಿನ 37, ಹರಿಹರ ತಾಲ್ಲೂಕಿನ 21, ಜಗಳೂರು ತಾಲ್ಲೂಕಿನ 11, ಚನ್ನಗಿರಿ ತಾಲ್ಲೂಕಿನ 18, ಹೊನ್ನಾಳಿ ತಾಲ್ಲೂಕಿನ 20 ಮಂದಿ ಇದ್ದಾರೆ.</p>.<p>ಜಿಲ್ಲೆಯಲ್ಲಿ ಈವರೆಗೆ 17,987 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 15,583 ಮಂದಿ ಗುಣಮುಖರಾಗಿದ್ದಾರೆ. 2157 ಸಕ್ರಿಯ ಪ್ರಕರಣಗಳು ಇವೆ.</p>.<p class="Subhead"><strong>ನಾಲ್ಕು ಮಂದಿಗೆ ಪಾಸಿಟಿವ್</strong></p>.<p>ಸಾಸ್ವೆಹಳ್ಳಿಹೋಬಳಿ ವ್ಯಾಪ್ತಿಯ ಬೆನಕನಹಳ್ಳಿ 2, ಹೊಸಹಳ್ಳಿ, ಬೀರಗೊಂಡನಹಳ್ಳಿಯಲ್ಲಿ ತಲಾ ಒಂದು ಸೇರಿ 4 ಕೊರೊನಾ ಪ್ರಕರಣ ಪತ್ತೆಯಾಗಿದೆ ಎಂದು ಉಪತಹಶಿಲ್ದಾರ್ ಎಸ್. ಪರಮೇಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಜಿಲ್ಲೆಯಲ್ಲಿ 450 ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ನಾಲ್ವರು ಮೃತಪಟ್ಟಿದ್ದಾರೆ. 107 ಮಂದಿ ಗುಣಮುಖರಾಗಿದ್ದಾರೆ.</p>.<p>ಆರೋಗ್ಯ ಇಲಾಖೆ ನೌಕರರ ಮುಷ್ಕರ ಹಾಗೂ ತಾಂತ್ರಿಕ ದೋಷದಿಂದ ಒಂದು ವಾರದಿಂದ ಬಾಕಿ ಇದ್ದ ಪ್ರಕರಣಗಳು ಶುಕ್ರವಾರ ಸೇರ್ಪಡೆಯಾಗಿವೆ.</p>.<p>ಜಗಳೂರು ತಾಲ್ಲೂಕಿನ ಬಸವನಕೋಟೆಯ 56 ವರ್ಷದ ಮಹಿಳೆ ಅಕ್ಟೋಬರ್ 4 ಹಾಗೂ ಜಗಳೂರು ಪಟ್ಟಣದ 57 ವರ್ಷದ ಪುರುಷ ಅಕ್ಟೋಬರ್ 8ರಂದು ಮೃತಪಟ್ಟಿದ್ದಾರೆ. ಹರಿಹರ ತಾಲ್ಲೂಕಿನ ಸಾಲೆಕಟ್ಟೆ 60 ವರ್ಷದ ಪುರುಷ ಹಾಗೂ ದಿಟೂರಿನ 55 ವರ್ಷದ ಪುರುಷ ಅಕ್ಟೋಬರ್ 8ರಂದು ಮೃತಪಟ್ಟಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 247 ಮಂದಿ ಮೃತಪಟ್ಟಿದ್ದಾರೆ.</p>.<p>ದಾವಣಗೆರೆ ನಗರ ಹಾಗೂ ತಾಲ್ಲೂಕಿನಲ್ಲಿ 178, ಹರಿಹರ ತಾಲ್ಲೂಕಿನ 72, ಜಗಳೂರು ತಾಲ್ಲೂಕಿನ 56, ಚನ್ನಗಿರಿ ತಾಲ್ಲೂಕಿನ 65, ಹೊನ್ನಾಳಿ ತಾಲ್ಲೂಕಿನ 76 ಹಾಗೂ ಹೊರ ಜಿಲ್ಲೆಯ ಮೂವರಿಗೆ ಕೋವಿಡ್–19 ದೃಢಪಟ್ಟಿದೆ.</p>.<p>ಬಿಡುಗಡೆಗೊಂಡವರಲ್ಲಿ ದಾವಣಗೆರೆ ನಗರ ಹಾಗೂ ತಾಲ್ಲೂಕಿನ 37, ಹರಿಹರ ತಾಲ್ಲೂಕಿನ 21, ಜಗಳೂರು ತಾಲ್ಲೂಕಿನ 11, ಚನ್ನಗಿರಿ ತಾಲ್ಲೂಕಿನ 18, ಹೊನ್ನಾಳಿ ತಾಲ್ಲೂಕಿನ 20 ಮಂದಿ ಇದ್ದಾರೆ.</p>.<p>ಜಿಲ್ಲೆಯಲ್ಲಿ ಈವರೆಗೆ 17,987 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 15,583 ಮಂದಿ ಗುಣಮುಖರಾಗಿದ್ದಾರೆ. 2157 ಸಕ್ರಿಯ ಪ್ರಕರಣಗಳು ಇವೆ.</p>.<p class="Subhead"><strong>ನಾಲ್ಕು ಮಂದಿಗೆ ಪಾಸಿಟಿವ್</strong></p>.<p>ಸಾಸ್ವೆಹಳ್ಳಿಹೋಬಳಿ ವ್ಯಾಪ್ತಿಯ ಬೆನಕನಹಳ್ಳಿ 2, ಹೊಸಹಳ್ಳಿ, ಬೀರಗೊಂಡನಹಳ್ಳಿಯಲ್ಲಿ ತಲಾ ಒಂದು ಸೇರಿ 4 ಕೊರೊನಾ ಪ್ರಕರಣ ಪತ್ತೆಯಾಗಿದೆ ಎಂದು ಉಪತಹಶಿಲ್ದಾರ್ ಎಸ್. ಪರಮೇಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>