ದಾವಣಗೆರೆ: ಇಲ್ಲಿನ ದೇವರಾಜ ಅರಸು ಬಡಾವಣೆಯ ಶ್ರೀಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನ ಗೋಪುರದ ಕಳಶ ಪ್ರತಿಷ್ಠಾಪನೆ ಬುಧವಾರ ನೆರವೇರಿತು.
ರಾಮಕೃಷ್ಣ ಆಶ್ರಮದ ಸ್ವಾಮಿ ತೀರ್ಥ ಕರಾನಂದಜೀ ಮಹಾರಾಜ್ ಕಳಶ ಪ್ರತಿಷ್ಠಾಪನೆ ನೆರವೇರಿಸಿದರು.
ಬಸವಾಪಟ್ಟಣದ ರಾಂಪುರ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ ಮಾತನಾಡಿ ‘ಕಳಶವನ್ನು ನೋಡಿದರೆ ಭಕ್ತಿಪೂರ್ವಕವಾಗಿ ದೇವರು ನೋಡಿದಷ್ಟು ಪುಣ್ಯ ಸಿಗುತ್ತದೆ. ಅಂದುಕೊಂಡ ಕೆಲಸವಾಗುತ್ತದೆ’ ಎಂದರು.
ಕಳಸವನ್ನು ಏಕೆ ಇಡಬೇಕು, ಅದರ ಉಪಯೋಗ ಹಾಗೂ ಕಳಸ, ದೇವರು ಹಾಗೂ ಮನುಷ್ಯನಿಗೂ ಸಂಬಂಧಗಳ ಬಗ್ಗೆ ವಿವರಿಸಿದರು.
ಆರ್. ಜಿ.ನಾಗೇಂದ್ರಪ್ರಸಾದ್, ಬಿ.ವಿ.ಗಂಗಪ್ಪಶೆಟ್ಟಿ, ವೆಂಕಟಾಚಲಪತಿ, ಕಡೆಕೊಪ್ಪ ನಾಗಭೂಷಣ್, ಪ್ರಕಾಶ್ ಪಾಟೀಲ್, ವೈ.ಬಿ.ಸತೀಶ್ ಪಾಲ್ಗೊಂಡಿದ್ದರು.