‘ಅಂತರ್ಜಲ ಕುಸಿದು, ನೀರು ಸಿಗದೇ ಇದ್ದಾಗ ಲಕ್ಷಾಂತರ ರೂಪಾಯಿ ಸಾಲ ಮಾಡಿ, ಹಲವು ಕಿಲೋ ಮೀಟರ್ಗಳಷ್ಟು ದೂರದಿಂದ ಕೊಳವೆಮಾರ್ಗ ಅಳವಡಿಸಿ, ತೋಟಗಳನ್ನು ಉಳಿಸಿಕೊಂಡಿದ್ದೇವೆ. ಈ ವರ್ಷವಾದರೂ ಅಡಿಕೆ ಬೆಲೆ ಏರಿಕೆಯಾಗಿ ಸಾಲ ತೀರಿಸಬಹುದು ಎಂಬ ನಮ್ಮ ನಿರೀಕ್ಷೆ ಹುಸಿಯಾಗುತ್ತಿದೆ’ ಎನ್ನುತ್ತಾರೆ ಇಲ್ಲಿನ ಪ್ರಮುಖ ಅಡಿಕೆ ಬೆಳೆಗಾರ ಎಂ.ಎಸ್. ಜಯಣ್ಣ.