ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲ್ಟಿಯಾಗಿ ನೀವು ಸತ್ತರೆ ಅರಿವಾಗುತ್ತೆ: ಅಧಿಕಾರಿಗಳಿಗೆ ಸಂಸದ ಸಿದ್ದೇಶ್ವರ ತರಾಟೆ

Last Updated 8 ಜುಲೈ 2021, 14:06 IST
ಅಕ್ಷರ ಗಾತ್ರ

ದಾವಣಗೆರೆ: ‘ನಿಮ್ಮ ವಾಹನ ಪಲ್ಟಿ ಹೊಡೆಯಬೇಕು. ನಿಮ್ಮಲ್ಲಿ ಯಾರಾದರೂ ಸಾಯಬೇಕು. ಆಗ ನಿಮಗೆ ಅರಿವಾಗುತ್ತದೆ. ಬೇರೆಯವರನ್ನು ಸಾಯಿಸಲು ನೀವಿದ್ದೀರಿ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಮಾಡಿರುವ ಕಾಮಗಾರಿಗಳು ಸರಿಯಾಗಿಲ್ಲ ಎಂಬ ಕಾರಣಕ್ಕೆ ಸಿಟ್ಟಾಗಿರುವ ಸಂಸದರು ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ರೀತಿ ಮಾತನಾಡಿದ್ದಾರೆ.

ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯ ಬಳಿ ಫಸ್ಟ್‌ಕ್ಲಾಸ್‌ ಸರ್ವಿಸ್‌ ರಸ್ತೆ ಇದೆ. ಅಲ್ಲಿ ಎರಡು ಅಂತರ ಇಟ್ಟಿರುವುದರಿಂದ ವಾಹನಗಳು ವೇಗವಾಗಿ ಬಂದರೆ ಪಲ್ಟಿ ಹೊಡೆಯುತ್ತವೆ ಎಂದು ಸಂಸದರು ತಿಳಿಸಿದರು.

ಅದನ್ನು ಸರಿಪಡಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT