ಶಾಲೆಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಎಂ.ಶಿವರಾಜು, ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ತಪ್ಪಿಸಲು ಪ್ರಿಯದರ್ಶಿನಿ, ನಂದಿನಿ, ಹಳದಮ್ಮದೇವಿ, ಗಂಗಾಪರಮೇಶ್ವರಿ, ವೀರಭದ್ರೇಶ್ವರ ಸ್ತ್ರೀಶಕ್ತಿ ಹಾಗೂ ಎ.ಜಿ. ಶಾರದಮ್ಮ ಅವರು ಸಂಘಟಿತರಾಗಿ 1ನೇ ತರಗತಿ ಪ್ರವೇಶ ಪಡೆದ 12 ಮಕ್ಕಳ ಹೆಸರಿನಲ್ಲಿ 7 ವರ್ಷಗಳ ಅವಧಿಗೆ ₹ 500 ಠೇವಣಿ ಇಟ್ಟು, ಸಂಬಂಧಿಸಿದ ಬಾಂಡ್ ಅನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ ಎಂದು ತಿಳಿಸಿದರು.