ಎಲ್ಲಾ ಸಾಮಾಜಿಕ ಸಂಪತ್ತು ಉತ್ಪಾದನೆಗೆ ಕಾರ್ಮಿಕರ ಶ್ರಮ ಶಕ್ತಿ ಅಗತ್ಯ. ಕಾರ್ಮಿಕರಿಲ್ಲದೇ ಯಾವುದೇ ಯಂತ್ರ ಚಾಲನೆಯಾಗದು. ಪೆಟ್ರೋಲ್, ಕಲ್ಲಿದ್ದಲು ಸೇರಿ ಪ್ರತಿಯೊಂದು ಸಾಮಾಜಿಕ ಸಂಪತ್ತಿನಲ್ಲಿ ಕಾರ್ಮಿಕರ ಶ್ರಮವಿದೆ. ಕಾರ್ಮಿಕರ ಅವಶ್ಯಕತೆ ಮುಖ್ಯವೆಂಬುದು ಮಾಲೀಕರ ವರ್ಗಕ್ಕೆ ತಿಳಿದಿದೆ. ಆದರೆ, ಕಾರ್ಮಿಕರಿಗೆ ತಮ್ಮ ಶ್ರಮಶಕ್ತಿಯ ಬಗ್ಗೆ ಅರಿವಿಲ್ಲ. ಆದ್ದರಿಂದ ಬಂಡವಾಳ ಶಾಹಿಗಳಿಂದ ಕಾರ್ಮಿಕರು ಶೋಷಣೆಗೊಳಗಾಗುತ್ತಿದ್ದಾರೆ. ಅಲ್ಲದೇ ನಿಗದಿತ ಅವಧಿಗಿಂತಲೂ ಹೆಚ್ಚು ತಾಸು ದುಡಿಸಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.