<p>ಬಸವಾಪಟ್ಟಣ (ದಾವಣಗೆರೆ): ಸಮೀಪದ ನಿಲೋಗಲ್ ಗ್ರಾಮದ ಬಳಿ ಅಡಿಕೆ ತೋಟದ ತಂತಿಬೇಲಿಗೆ ಅಳವಡಿಸಿದ್ದ ಉರುಳಿಗೆ ಸಿಲುಕಿ 1 ವರ್ಷದ ಹೆಣ್ಣು ಚಿರತೆ ಮೃತಪಟ್ಟಿದೆ. </p>.<p>ರೈತ ಜಿ. ರಂಗನಗೌಡ ಅವರ ತೋಟದಲ್ಲಿ ಅವಘಡ ನಡೆದಿದೆ. ಶನಿವಾರ ಬೆಳಿಗ್ಗೆ ರೈತರು ತೋಟಕ್ಕೆ ತೆರಳಿದಾಗ ಚಿರತೆ ಸಿಲುಕಿದ್ದು ಗೊತ್ತಾಗಿದೆ. ಚಿರತೆ ರಕ್ಷಿಸುವ ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ ಫಲಕಾರಿಯಾಗಲಿಲ್ಲ. </p>.<p>‘ಚಿರತೆ ಶುಕ್ರವಾರವೇ ಸಿಲುಕಿರಬಹುದು. ಉರುಳಿಗೆ ಮೂರು ಕಾಲು ಸಿಲುಕಿ ತೀವ್ರವಾಗಿ ಗಾಯಗೊಂಡಿತ್ತು’ ಎಂದು ಭದ್ರಾವತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ರವೀಂದ್ರಕುಮಾರ್ ತಿಳಿಸಿದ್ದಾರೆ.</p>.<p>ಚಿರತೆ ಸಾವಿನ ಕುರಿತು ತನಿಖೆ ನಡೆದಿದೆ. ದುಷ್ಕರ್ಮಿಗಳು ತಂತಿಬೇಲಿಗೆ ಉರುಳು ಅಳವಡಿಸಿ ಕಾಡುಹಂದಿ ಮತ್ತಿತರ ಪ್ರಾಣಿ ಬೇಟೆಯಾಡುತ್ತಾರೆ. ಅಂತದೇ ಉರುಳಿಗೆ ಚಿರತೆ ಸಿಲುಕಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವಾಪಟ್ಟಣ (ದಾವಣಗೆರೆ): ಸಮೀಪದ ನಿಲೋಗಲ್ ಗ್ರಾಮದ ಬಳಿ ಅಡಿಕೆ ತೋಟದ ತಂತಿಬೇಲಿಗೆ ಅಳವಡಿಸಿದ್ದ ಉರುಳಿಗೆ ಸಿಲುಕಿ 1 ವರ್ಷದ ಹೆಣ್ಣು ಚಿರತೆ ಮೃತಪಟ್ಟಿದೆ. </p>.<p>ರೈತ ಜಿ. ರಂಗನಗೌಡ ಅವರ ತೋಟದಲ್ಲಿ ಅವಘಡ ನಡೆದಿದೆ. ಶನಿವಾರ ಬೆಳಿಗ್ಗೆ ರೈತರು ತೋಟಕ್ಕೆ ತೆರಳಿದಾಗ ಚಿರತೆ ಸಿಲುಕಿದ್ದು ಗೊತ್ತಾಗಿದೆ. ಚಿರತೆ ರಕ್ಷಿಸುವ ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ ಫಲಕಾರಿಯಾಗಲಿಲ್ಲ. </p>.<p>‘ಚಿರತೆ ಶುಕ್ರವಾರವೇ ಸಿಲುಕಿರಬಹುದು. ಉರುಳಿಗೆ ಮೂರು ಕಾಲು ಸಿಲುಕಿ ತೀವ್ರವಾಗಿ ಗಾಯಗೊಂಡಿತ್ತು’ ಎಂದು ಭದ್ರಾವತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ರವೀಂದ್ರಕುಮಾರ್ ತಿಳಿಸಿದ್ದಾರೆ.</p>.<p>ಚಿರತೆ ಸಾವಿನ ಕುರಿತು ತನಿಖೆ ನಡೆದಿದೆ. ದುಷ್ಕರ್ಮಿಗಳು ತಂತಿಬೇಲಿಗೆ ಉರುಳು ಅಳವಡಿಸಿ ಕಾಡುಹಂದಿ ಮತ್ತಿತರ ಪ್ರಾಣಿ ಬೇಟೆಯಾಡುತ್ತಾರೆ. ಅಂತದೇ ಉರುಳಿಗೆ ಚಿರತೆ ಸಿಲುಕಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>