‘ಸಿದ್ದೇಶ್ವರ ಹಠಾವೋ, ದಾವಣಗೆರೆ ಬಚಾವೋ’, ‘ಸಿದ್ದೇಶ್ವರ ಗೋ ಬ್ಯಾಕ್’ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು. ಇದೇ ವೇಳೆ ಸಿದ್ದೇಶ್ವರ ಪತ್ನಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಕಾರ್ಯಕರ್ತನೊಬ್ಬ ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ ತಡೆದ ಇತರ ಕಾರ್ಯಕರ್ತರು, ತಲೆಯ ಮೇಲೆ ನೀರು ಸುರಿದು ಸಮಾಧಾನಪಡಿಸಿದರು.