ಹರಿಹರ: ಇಲ್ಲಿನಗಾಂಧಿನಗರದ ಸೀಲ್ಡೌನ್ ಪ್ರದೇಶದಲ್ಲಿ ಗುರುವಾರ ವಿವಾಹ ನಡೆಸುವ ಮೂಲಕ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ 6 ಜನರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಾಗಿದೆ.
ಗಾಂಧಿನಗರದ 2ನೇ ಕ್ರಾಸ್ ನಿವಾಸಿಗಳಾದ ಹುಸೇನ್ಸಾಬ್, ಜರೀನಾ, ರೇಷ್ಮಾಬಾನು, ಹಜಿರಾಬಿ, ಆಸ್ಮಾಬಾನು ಹಾಗೂ ದಾವಣಗೆರೆ ನಿವಾಸಿ ನಜೀಮಾ ವಿರುದ್ಧ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆ-2005ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಗಾಂಧಿನಗರ ಕಂಟೈನ್ಮೆಂಟ್ ವಲಯದ ಇನ್ಸಿಡೆಂಟ್ ಕಮಾಂಡರ್ ರಾಮಕೃಷ್ಣ ನೀಡಿದ ದೂರಿನ ಅನ್ವಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.