ಈ ರಸ್ತೆ ಅಭಿವೃದ್ಧಿಗೊಳಿಸಿದರೆ ಮಲ್ಲಶೆಟ್ಟಿಹಳ್ಳಿ ಗ್ರಾಮದಿಂದ ಮುಂದೆ ಕುರ್ಕಿ, ಹನುಮನಹಳ್ಳಿ, ಈಚಗಟ್ಟ, ಕರೇಲಕ್ಕೇನಹಳ್ಳಿ ಸೇರಿ ಇತರೆ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಿದಂತಾಗಲಿದೆ. ಇದೇ ಮಾರ್ಗದಲ್ಲಿರುವ ಉದ್ಯಮಗಳಿಗೆ ಹೋಗಲೂ ಅನುಕೂಲವಾಗಲಿದೆ. ಎಸ್.ಸಿ., ಎಸ್.ಟಿ. ಜನಾಂಗದ ಕಾಲೊನಿ, ಶ್ರಮಿಕರಿಗಾಗಿಯೇ ನಿರ್ಮಿಸಿರುವ ಶ್ರಮಜೀವಿ ಪಂಪಾಪತಿ ಕಟ್ಟಡ ಕಾರ್ಮಿಕರ ಬಡಾವಣೆ ಇದೆ. ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಕೋರಿದರು.