ತಮ್ಮ ವಿರುದ್ಧ ಎಚ್. ವಿಶ್ವನಾಥ್ ನೀಡಿದ್ದ ಹೇಳಿಕೆಗೆ ತಾಲ್ಲೂಕಿನ ಬೆಳ್ಳೂಡಿ ಕನಕ ಪೀಠದ ಶಾಖಾ ಮಠದಲ್ಲಿ ಶನಿವಾರ ಸುದ್ದಿಗಾರರಿಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು. ‘ಗುರುಪೀಠ ಯಾವುದೇ ರಾಜಕೀಯ ಪಕ್ಷಗಳ ಪರ ಅಥವಾ ವಿರುದ್ಧವಿಲ್ಲ. ಆದರೆ, ನಮ್ಮ ಸಮುದಾಯದವರಿಗೆ ಮತ್ತು ಮಠದ ಭಕ್ತರಿಗೆ ತೊಂದರೆಯಾದಾಗ, ಯಾರು ಬಂದರೂ ಎದುರಿಸುತ್ತೇನೆ. ಈ ಹಿಂದೆ ಕೆ.ಎಸ್. ಈಶ್ವರಪ್ಪ, ವಿಶ್ವನಾಥ್ ಅವರಿಗೆ ನೋವಾದಾಗ ಸ್ಪಂದಿಸಿದ್ದೇನೆ. ಸಮುದಾಯಕ್ಕೆ ನೋವಾಗುತ್ತಿರುವ ಹಿನ್ನೆಲೆಯಲ್ಲಿ ಧ್ವನಿ ಎತ್ತಿದ್ದೇನೆ ಹೊರತು, ಯಾವುದೇ ವೈಯಕ್ತಿಕ ಹಿತಾಸಕ್ತಿ ಅಥವಾ ಪ್ರತಿಷ್ಠೆಗಾಗಿ ಅಲ್ಲ. ಈ ವಿಷಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.