<p> <strong>ನ್ಯಾಮತಿ:</strong> ಚುಟುಕು ಸಾಹಿತ್ಯ ರಚಿಸುವವರು ಸಮಾಜದ ಅಂಕು ಡೊಂಕುಗಳನ್ನು ಕುಟುಕುವ ರೀತಿಯಲ್ಲಿರಬೇಕು ಎಂದು ಚುಟುಕು ಸಾಹಿತ್ಯ ಪರಿಷತ್ತು ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ ತೆಲಿಗಿ ಸಲಹೆ ನೀಡಿದರು.</p>.<p>ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಭಾನುವಾರ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಮತ್ತು ತಾಲ್ಲೂಕು ಚುಟುಕು ಸಾಹಿತ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಚುಟುಕು ಸಾಹಿತ್ಯ ಕವಿಗೋಷ್ಠಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಗಮನಹರಿಸಲಾಗುವುದು, ಈ ನಿಟ್ಟಿನಲ್ಲಿ ಕವಿಗಳ ಮತ್ತು ಸಾರ್ವಜನಿಕರ ಸಲಹೆ ಸಹಕಾರ ಬೇಕಾಗುತ್ತದೆ ಎಂದು ಮನವಿ ಮಾಡಿದರು. </p><p><br> ಹೊನ್ನಾಳಿ ತಾಲ್ಲೂಕಿನ ಹಿರಿಯ ಸಾಹಿತಿ ಕೊಟ್ರೇಶ ನಾ ಉತ್ತಂಗಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕವನಗಳನ್ನು ರಚಿಸಬಹುದು ಆದರೆ ಚುಟುಕುಗಳನ್ನು ರಚಿಸುವುದು ಬಹಳ ಕಷ್ಟ, ಇದಕ್ಕಾಗಿ ಸಾಕಷ್ಟು ಸಾಹಿತ್ಯ ಕೃಷಿಯನ್ನು ಮಾಡಬೇಕಾಗುತ್ತದೆ ಎಂದರು. </p><p><br> ಚುಟುಕು ಸಾಹಿತ್ಯ ಕುರಿತು ಹಿರಿಯ ಸಾಹಿತಿ ತವನಿಧಿ ಓಂಕಾರಯ್ಯ, ದಾವಣಗೆರೆ ತಾಲ್ಲೂಕು ಚುಟುಕುಸಾಹಿತ್ಯ ಪರಿಷತ್ತು ಅಧ್ಯಕ್ಷ ಮಂಜುನಾಥ, ಹೊನ್ನಾಳಿ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಯೋಗಿಶ ಪಾಟೀಲ್ ಉಪಯುಕ್ತ ಮಾಹಿತಿ ನೀಡಿದರು. <br> ನೂತನ ಅಧ್ಯಕ್ಷ ಎಂ.ಜಿ.ಕವಿರಾಜ ಅವರಿಗೆ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ ತೆಲಗಿ ಅವರು ಸೇವಾದೀಕ್ಷೆ ನೀಡಿ ಪರಿಷತ್ತಿನ ಧ್ವಜವನ್ನು ಹಸ್ತಾಂತರ ಮಾಡಿದರು. </p><p><br> ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ನಾಗರಾಜಪ್ಪ ಅರ್ಕಾಚಾರ್, ಉಪಾಧ್ಯಕ್ಷ ಜಿ.ನಿಜಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಬಿ.ರವೀಂದ್ರಚಾರ್, ಸಹಕಾರ್ಯದರ್ಶಿ ಈ ಸುಮಲತಾ, ಕೋಶಾಧ್ಯಕ್ಷ ಸೊಂಡೂರು ಮಹೇಶ್ವರಪ್ಪ, ಸಂಘಟನಾ ಕಾರ್ಯದರ್ಶಿ ಬಿ.ಆರ್.ಭಾಗ್ಯಲಕ್ಷ್ಮಿ, ನಿರ್ದೇಶಕರಾದ ಟಿ.ಆರ್.ಕುಬೇರಪ್ಪ, ಸುಭಾಸ್ಚಚಂದ್ರರೆಡ್ಡಿ,ಎ.ಹಂಪಣ್ಣ, ಬಿ.ಜಿ.ಚೈತ್ರಾ, ಎಂ.ಎಸ್.ಜಗದೀಶ, ಸಿ.ಆರ್.ಶ್ವೇತಾ, ಜಿ.ಷಡಾಕ್ಷರಿ, ಎಸ್.ಪಾಲಾಕ್ಷಪ್ಪ, ಪಿಡಿಒ ಎಂ.ಜಯಪ್ಪ, ಬಿ.ಆರ್. ಉಷಾ, ಕದಳಿ ಅಧ್ಯಕ್ಷೆ ಅಂಬಿಕಾ ಬಿದರಕಟ್ಟೆ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಬಿ.ಶಿವಯೋಗಿ, ಚಂದನ್ ಜಂಗ್ಲೀ ಉಪಸ್ಥಿತರಿದ್ದರು. </p><p><br> ವಿವಿಧ ಕವಿಗಳು ತಮ್ಮ ಚುಟುಕು ಕವನಗಳನ್ನು ವಾಚಿಸುವ ಮೂಲಕ ಸಭೆಯನ್ನು ರಂಜಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> <strong>ನ್ಯಾಮತಿ:</strong> ಚುಟುಕು ಸಾಹಿತ್ಯ ರಚಿಸುವವರು ಸಮಾಜದ ಅಂಕು ಡೊಂಕುಗಳನ್ನು ಕುಟುಕುವ ರೀತಿಯಲ್ಲಿರಬೇಕು ಎಂದು ಚುಟುಕು ಸಾಹಿತ್ಯ ಪರಿಷತ್ತು ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ ತೆಲಿಗಿ ಸಲಹೆ ನೀಡಿದರು.</p>.<p>ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಭಾನುವಾರ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಮತ್ತು ತಾಲ್ಲೂಕು ಚುಟುಕು ಸಾಹಿತ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಚುಟುಕು ಸಾಹಿತ್ಯ ಕವಿಗೋಷ್ಠಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಗಮನಹರಿಸಲಾಗುವುದು, ಈ ನಿಟ್ಟಿನಲ್ಲಿ ಕವಿಗಳ ಮತ್ತು ಸಾರ್ವಜನಿಕರ ಸಲಹೆ ಸಹಕಾರ ಬೇಕಾಗುತ್ತದೆ ಎಂದು ಮನವಿ ಮಾಡಿದರು. </p><p><br> ಹೊನ್ನಾಳಿ ತಾಲ್ಲೂಕಿನ ಹಿರಿಯ ಸಾಹಿತಿ ಕೊಟ್ರೇಶ ನಾ ಉತ್ತಂಗಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕವನಗಳನ್ನು ರಚಿಸಬಹುದು ಆದರೆ ಚುಟುಕುಗಳನ್ನು ರಚಿಸುವುದು ಬಹಳ ಕಷ್ಟ, ಇದಕ್ಕಾಗಿ ಸಾಕಷ್ಟು ಸಾಹಿತ್ಯ ಕೃಷಿಯನ್ನು ಮಾಡಬೇಕಾಗುತ್ತದೆ ಎಂದರು. </p><p><br> ಚುಟುಕು ಸಾಹಿತ್ಯ ಕುರಿತು ಹಿರಿಯ ಸಾಹಿತಿ ತವನಿಧಿ ಓಂಕಾರಯ್ಯ, ದಾವಣಗೆರೆ ತಾಲ್ಲೂಕು ಚುಟುಕುಸಾಹಿತ್ಯ ಪರಿಷತ್ತು ಅಧ್ಯಕ್ಷ ಮಂಜುನಾಥ, ಹೊನ್ನಾಳಿ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಯೋಗಿಶ ಪಾಟೀಲ್ ಉಪಯುಕ್ತ ಮಾಹಿತಿ ನೀಡಿದರು. <br> ನೂತನ ಅಧ್ಯಕ್ಷ ಎಂ.ಜಿ.ಕವಿರಾಜ ಅವರಿಗೆ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ ತೆಲಗಿ ಅವರು ಸೇವಾದೀಕ್ಷೆ ನೀಡಿ ಪರಿಷತ್ತಿನ ಧ್ವಜವನ್ನು ಹಸ್ತಾಂತರ ಮಾಡಿದರು. </p><p><br> ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ನಾಗರಾಜಪ್ಪ ಅರ್ಕಾಚಾರ್, ಉಪಾಧ್ಯಕ್ಷ ಜಿ.ನಿಜಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಬಿ.ರವೀಂದ್ರಚಾರ್, ಸಹಕಾರ್ಯದರ್ಶಿ ಈ ಸುಮಲತಾ, ಕೋಶಾಧ್ಯಕ್ಷ ಸೊಂಡೂರು ಮಹೇಶ್ವರಪ್ಪ, ಸಂಘಟನಾ ಕಾರ್ಯದರ್ಶಿ ಬಿ.ಆರ್.ಭಾಗ್ಯಲಕ್ಷ್ಮಿ, ನಿರ್ದೇಶಕರಾದ ಟಿ.ಆರ್.ಕುಬೇರಪ್ಪ, ಸುಭಾಸ್ಚಚಂದ್ರರೆಡ್ಡಿ,ಎ.ಹಂಪಣ್ಣ, ಬಿ.ಜಿ.ಚೈತ್ರಾ, ಎಂ.ಎಸ್.ಜಗದೀಶ, ಸಿ.ಆರ್.ಶ್ವೇತಾ, ಜಿ.ಷಡಾಕ್ಷರಿ, ಎಸ್.ಪಾಲಾಕ್ಷಪ್ಪ, ಪಿಡಿಒ ಎಂ.ಜಯಪ್ಪ, ಬಿ.ಆರ್. ಉಷಾ, ಕದಳಿ ಅಧ್ಯಕ್ಷೆ ಅಂಬಿಕಾ ಬಿದರಕಟ್ಟೆ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಬಿ.ಶಿವಯೋಗಿ, ಚಂದನ್ ಜಂಗ್ಲೀ ಉಪಸ್ಥಿತರಿದ್ದರು. </p><p><br> ವಿವಿಧ ಕವಿಗಳು ತಮ್ಮ ಚುಟುಕು ಕವನಗಳನ್ನು ವಾಚಿಸುವ ಮೂಲಕ ಸಭೆಯನ್ನು ರಂಜಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>