‘ರಾಜ್ಯದಾದ್ಯಂತ ನೂರಾರು ವರ್ಷಗಳಿಂದ ಹಾಡಿ, ತಾಂಡಾ, ಹಟ್ಟಿ, ಗೊಲ್ಲರಹಟ್ಟಿ, ವಾಡಿ, ಅರಣ್ಯ ಭೂಮಿ, ದೊಡ್ಡಿ, ಪುರಂ, ಪಾಳ್ಯ, ಕ್ಯಾಂಪ್, ಕಾಲೊನಿ, ವಿವಿಧ ರೀತಿಯ ಹೆಸರುಗಳಿಂದ ಕರೆಸಿಕೊಳ್ಳುವ ಜನವಸತಿ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಮೂಲಸೌಲಭ್ಯವಿಲ್ಲ. ಕುಡಿಯುವ ನೀರು ಇಲ್ಲದೇ ಊರನ್ನೇ ತೊರೆಯುತ್ತಿದ್ದಾರೆ. ಹೆಣ್ಣುಮಕ್ಕಳು ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ’ ಎಂದು ಹೇಳಿದರು.