ಪೆಟ್ರೋಲಿಯಂ ಉತ್ಪದನಾ ವಸ್ತುಗಳ ಮೇಲಿನ ಎಲ್ಲ ಸರ್ ಚಾರ್ಜ್ ಹಾಗೂ ಸೆಸ್ನ್ನು ಹಿಂಪಡೆಯಬೇಕು. ಈ ಹಿಂದೆ ಜಾರಿಯಲ್ಲಿದ್ದ ಅಡುಗೆ ಅನಿಲದ ಸಬ್ಸಿಡಿಯನ್ನು ದುಡಿಯುವ ಎಲ್ಲ ಕುಟುಂಬಗಳಿಗೆ ಪ್ರತಿ ಸಿಲಿಂಡರ್ಗೆ ₹ 200 ಸಬ್ಸಿಡಿ ಪುನಃ ಜಾರಿಗೆ ತರಬೇಕು. ಪೆಟ್ರೋಲ್, ಡೀಸೆಲ್ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆ ದರದ ಏರಿಕೆ ನೆವ ಕೈಬಿಟ್ಟು ದೇಶದ ರೈತರಿಗೆ, ನಾಗರಿಕರಿಗೆ ಕೈಗೆಟಕುವ ಬೆಲೆಯಲ್ಲಿ ಸರ್ಕಾರ ಪೂರೈಸಬೇಕು ಎಂದು ಒತ್ತಾಯಿಸಿದರು. ಬಳಿಕ ಕಂದಾಯ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಹೋಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಿಪಿಐನ ಆವರಗೆರೆ ಚಂದ್ರು, ಆವರಗೆರೆ ವಾಸು, ಆನಂದರಾಜ್, ಐರಣಿ ಚಂದ್ರು, ಸರೋಜ, ಷಣ್ಮುಖಪ್ಪ, ವಿ. ಲಕ್ಷ್ಮಣ್, ಶಿವಕುಮಾರ್ ಶೆಟ್ಟರ್, ಸಿಪಿಐಎಂನ ಕೆ.ಎಚ್. ಆನಂದರಾಜು, ಸುರೇಶ್ ಯರಗುಂಟೆ, ಬಸವರಾಜು, ಪರಶುರಾಮ್ ಇದ್ದರು.