2016ರ ಆ.29ರಂದು ಸಿದ್ದಪ್ಪ, ರೇಣುಕಪ್ಪ, ಕಿರಣ್, ಹೇಮಂತ್ ತಮ್ಮ ಜಮೀನಿನಲ್ಲಿದ್ದಾಗ ಬಸವರಾಜಪ್ಪ, ಮಾರುತಿ ಮತ್ತು ಗಣೇಶ್ ನೀರಿನ ವಿಚಾರವಾಗಿ ಸಿದ್ದಪ್ಪನ ಜತೆಗೆ ಜಗಳ ಆರಂಭಿಸಿದ್ದರು. ಸಲಾಕೆಯಿಂದ ಹೊಡೆದು, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು. ಈ ಕೊಲೆಗೆ ಹನುಮಂತಪ್ಪ, ಲಲಿತಮ್ಮ, ಗಂಗಮ್ಮ ಕುಮ್ಮಕ್ಕು ನೀಡಿದ್ದರು ಎಂದು ಸಿದ್ದಪ್ಪ ಅವರ ಸಹೋದರ ಚಂದ್ರಶೇಖರಪ್ಪ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಪಿಐ ಜೆ.ಎಸ್. ನ್ಯಾಮಗೌಡರ್ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.