ಹೊನ್ನಾಳಿಯಲ್ಲಿ ಸೋಮವಾರ ಬರ ಪರಶೀಲನೆಗೂ ಮೊದಲು ಮಾಧ್ಯಮದವರ ಜತೆ ಅವರು ಮಾತನಾಡಿ, ‘ಜಿಂದಾಲ್ಗೆ ಭೂಮಿ ಕೊಡುವಾಗ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರವಾಗಿದೆ. ಅದರಲ್ಲಿ ನಿನ್ನ ಪಾಲು ಎಷ್ಟು ಎಂದು ಶಾಸಕರನ್ನು ಆ ಭಾಗದ ಜನರು ಕೇಳುತ್ತಿದ್ದು, ಇದರಿಂದ ಮನಸ್ಸಿಗೆ ಮುಜುಗರವಾಗಿ ರಾಜೀನಾಮೆ ನೀಡಿರಬಹುದು ಎಂಬುದು ನನ್ನ ಅನಿಸಿಕೆ' ಎಂದರು.