ರಸ್ತೆ ನವೀಕರಣ ಮಾಡುವ ಸಮಯದಲ್ಲಿ ರೈತರಿಗಾಗಿ ಒಂದು ಕಡೆ ಪೈಪ್ ಲೈನ್ ಮಾಡಿಕೊಳ್ಳಲು ಲೋಕೋಪಯೋಗಿ ಇಲಾಖೆಯವರು ಅವಕಾಶ ಕಲ್ಪಿಸಿರುತ್ತಾರೆ. ಪೈಪ್ ಲೈನ್ ಅಳವಡಿಸಿದ ಸ್ಥಳದಿಂದ ರೈತರು ತಮ್ಮ ಜಮೀನುಗಳಿಗೆ ಪೈಪ್ ಲೈನ್ ಮಾಡಿಕೊಂಡು ಹೋಗಬೇಕಾಗಿರುತ್ತದೆ. ಆದರೆ, ರೈತರು ತಮಗೆ ಇಷ್ಟ ಬಂದ ರೀತಿಯಲ್ಲಿ ರಸ್ತೆಯನ್ನು ಅಗೆದು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ. ರಾತ್ರಿಯ ವೇಳೆ ರಸ್ತೆಯಲ್ಲಿ ಹೋಗುವ ವಾಹನಗಳು ಗುಂಡಿಯನ್ನು ಕಾಣದೇ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಗುಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಗೋಪನಾಳ್ ಗ್ರಾಮದ ವಾಸಿ, ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ಆರ್. ಪುನೀತ್ ಕುಮಾರ್ ಒತ್ತಾಯಿಸಿದ್ದಾರೆ.