‘ಜಾತಿರಹಿತ, ವರ್ಗರಹಿತ, ವರ್ಣರಹಿತ, ಲಿಂಗಬೇಧ ಹಾಗೂ ವಯೋಭೇದವಿಲ್ಲದ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡುವ ಆದರ್ಶ ಸಮಾಜವನ್ನು ಈ ದೇಶದ ನಾಗರಿಕರು ನಿರ್ಮಿಸಬೇಕಿದ್ದು, ಈ ಹಿನ್ನೆಲೆಯಲ್ಲಿ ಕಲ್ಯಾಣ ಪ್ರವಚನ ಏರ್ಪಡಿಸಲಾಗಿದೆ. ಕಲ್ಯಾಣ ಪ್ರವಚನದಿಂದ ಸಂಕುಚಿತ ಮನಸ್ಸು ವಿಶಾಲವಾಗುತ್ತದೆ. ದ್ವೇಷ, ಸ್ವಾರ್ಥ, ಮತ್ಸರ, ಅಹಂಕಾರ ದೂರವಾಗಿ ದಯೆ ಪ್ರೀತಿ, ಶ್ರದ್ಧೆ, ಅರಿವಿನಿಂದ ತುಂಬಿ ತುಳುತ್ತದೆ’ ಎಂದರು.