ದಾವಣಗೆರೆ: ನಗರ ದೇವತೆ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ದೀಪ ಹಚ್ಚುವ ಮೂಲಕ ನವರಾತ್ರಿ ಹಬ್ಬಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು.
ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಪ್ರಭಾ ಮಲ್ಲಿಕಾರ್ಜುನ, ಎಸ್.ಎಂ. ಸಮರ್ಥ್, ಎಸ್.ಎಸ್. ಗಣೇಶ್, ಪ್ರಭಾ ಮಲ್ಲಿಕಾರ್ಜುನ ಸಹಿತ ಶಾಮನೂರು ಕುಟುಂಬ ವರ್ಗದವರು, ದೇವಸ್ಥಾನದ ಟ್ರಸ್ಟ್ ನವರು ಉಪಸ್ಥಿತರಿದ್ದರು.
ನಿತ್ಯ ದಾಸೋಹ: ನವರಾತ್ರಿಯ ಪ್ರಯುಕ್ತ ಎಲ್ಲ 9 ದಿನಗಳ ಕಾಲ ನಿತ್ಯ ದಾಸೋಹ ನಡೆಯಲಿದೆ ಎಂದು ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ತಿಳಿಸಿದ್ದಾರೆ.
ಪ್ರತಿ ಮಂಗಳವಾರ ಮತ್ತು ಶುಕ್ರವಾರ ದಾಸೋಹ ಇತ್ತು. ಟ್ರಸ್ಟ್ ಗೌರವಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಮತ್ತು ಟ್ರಸ್ಟ್ ಸದಸ್ಯರು ನಿತ್ಯ ದಾಸೋಹಕ್ಕೆ ತೀರ್ಮಾನಕ್ಕೆ ಕೈಗೊಂಡಿದ್ದಾರೆ ಎಂದು ಪ್ರಕಟಣೆ ನೀಡಿದ್ದಾರೆ.
ನಗರದೇವತೆಗೆ ನಿತ್ಯ ಅಲಂಕಾರ ಮಾಡಲಾಗುತ್ತಿದ್ದು, ಗುರುವಾರ ಹಂಸವಾಹಿನಿ ಅಲಂಕಾರ ಮಾಡಲಾಗಿದೆ.