ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ- 2.0: ಲೋಪ ಸರಿಪಡಿಸಲು ಆಗ್ರಹ

Published 12 ಜುಲೈ 2023, 15:38 IST
Last Updated 12 ಜುಲೈ 2023, 15:38 IST
ಅಕ್ಷರ ಗಾತ್ರ

ಹೊನ್ನಾಳಿ: ಕಾವೇರಿ –2.0 ತಂತ್ರಾಂಶದಲ್ಲಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ  ಪತ್ರ ಬರಹಗಾರರು ಮಂಗಳವಾರ ಉಪನೊಂದಣಾಧಿಕಾರಿ ಪ್ರಭಾಕರ್ ಮಠದ್ ಅವರಿಗೆ ಮನವಿ ಸಲ್ಲಿಸಿದರು.

ಹೊಸದಾಗಿ ಅಳವಡಿಸಿರುವ ಕಾವೇರಿ –2.0 ತತ್ರಾಂಶದಲ್ಲಿ ಅನೇಕ ಲೋಪಗಳಿವೆ. ನೋಂದಣಿ ಆಗುವ ಮುಂಚೆ ಹಾಗೂ ಆದ ನಂತರ ಹಲವಾರು ಬಾರಿ ಉಪನೋಂದಣಿ ಕಚೇರಿಗೆ ಸಾರ್ವಜನಿಕರು ಅಲೆದಾಡಬೇಕಾದ ಪರಿಸ್ಥಿತಿ ಬಂದಿದೆ. ಪ್ರತಿದಿನ ನೊಂದಣಿ ಬಹಳ ವಿಳಂಬವಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದಿಂದ ಬರುವ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಇದನ್ನು ಕೂಡಲೇ ಸರಿಪಡಿಸಿ ಎಂದು ಮನವಿ ಮಾಡಿದರು.

ಪತ್ರ ಬರಹಗಾರರಾದ ಸುರೇಶ್, ಕರಿಬಸಪ್ಪ, ಶಂಕರ್ ಕುಮಾರ್, ಶಿವಮೂರ್ತಿ, ತೋಟಪ್ಪ, ಉಮೇಶ್, ಪ್ರಕಾಶ್, ಮೈಲಪ್ಪ, ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT