ತುಪ್ಪದಹಳ್ಳಿ ಗ್ರಾಮದಲ್ಲಿ 250ಕ್ಕೂ ಹೆಚ್ಚು ಕುಟುಂಬಗಳಿದ್ದು, ಪಕ್ಕದ ಮರಿಕುಂಟೆ ಗ್ರಾಮದಿಂದ ಪ್ರತಿ ತಿಂಗಳು ಪಡಿತರವನ್ನು ಹೊತ್ತು ತರಬೇಕಾದ ಸ್ಥಿತಿ ಇದೆ. ಮರಿಕುಂಟೆ ಗ್ರಾಮದ 5 ಕಿ.ಮೀ ದೂರ ಇದ್ದು, ವೃದ್ಧರು, ಬಡವರು ನಡೆದೇ ಹೋಗಬೇಕಿದೆ. ಪಡಿತರ ತರಲು ಕೆಲವು ದಿನಗಳು ವಿಳಂಬವಾದಲ್ಲಿ ಖಾಲಿಯಾಗಿದೆ ಎಂದು ಮಾಲೀಕರು ಹಿಂದಕ್ಕೆ ಕಳಿಸುತ್ತಾರೆ ಇದರಿಂದ ಬಡ ಪಡಿತರದಾರರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.