ಕೋಡಿಹಳ್ಳಿ (ಕನಕಪುರ): ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಅಜ್ಜಬಸವನಹಳ್ಳಿಯಲ್ಲಿರುವ ಮದ್ರಾಚಾಪುರ ವೀರಧರ್ಮ ಸಿಂಹಾಸನ ಸಂಸ್ಥಾನದ ಶಾಖಾಮಠದಲ್ಲಿ ಡಿಸೆಂಬರ್ 7 ರಂದು ಕಾರ್ತಿಕ ಮಾಸದ ದೀಪೋತ್ಸವ ಹಾಗೂ ಅಭಿನಂದನಾ ಸಮಾರಂಭ ನಡೆಯಲಿದೆ.
ದೇಗುಲಮಠದ ಡಾ.ಮುಮ್ಮಡಿ ನಿರ್ವಾಣಸ್ವಾಮಿ, ಮರಳೇಗವಿಮಠದ ಡಾ.ಮುಮ್ಮಡಿ ಶಿವರುದ್ರಸ್ವಾಮಿ ಸಾನ್ನಿಧ್ಯ ವಹಿಸಲಿದ್ದಾರೆ. ಕೋಡಿಹಳ್ಳಿ ಮಠದ ಚಂದ್ರಶೇಖರಸ್ವಾಮಿ, ಮುಳ್ಳಹಳ್ಳಿ ಮಠದ ಗುರುಪಾದ ಶಿವಾಚಾರ್ಯಸ್ವಾಮಿ, ಉಡಬರಾಣೆ ಮಠದ ಶಿವಶಂಕರ ಶಿವಾಚಾರ್ಯಸ್ವಾಮಿ, ನೇರಳಹಟ್ಟಿ ಮಠದ ಬಸವಲಿಂಗಸ್ವಾಮಿ ಭಾಗವಹಿಸಲಿದ್ದಾರೆ.
ಬೆಂಗಳೂರು ಮಹಾಪೌರರಾದ ಗಂಗಾಂಬಿಕಾ ಮಲ್ಲಿಕಾರ್ಜುನ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರುದ್ರೇಶ್, ಅಖಿಲ ಭಾರತೀಯ ವೀರಶೈವ ಮಹಾಸಭಾದ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ಅವರನ್ನು ಸನ್ಮಾನಿಸಲಾಗುವುದು.
ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್, ವೀರಶೈವ ಮುಖಂಡರಾದ ಸಿ.ಡಿ.ಬಸಪ್ಪ, ಶಿವನಂಜಪ್ಪ, ಡಾ.ಮಂಜುನಾಥ್, ಕೈಲಾಶ್ ಶಂಕರ್, ಮಹೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್, ಮುಳ್ಳಳ್ಳಿ ನಂಜುಂಡಪ್ಪ, ಬಿಜ್ಜಳ್ಳಿ ನಂದೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.