ರಾಜನಗರದಲ್ಲಿರುವ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಳಗಾವಿಯ ತಂಡ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 194 ರನ್ ಕಲೆಹಾಕಿತು. ಸಿದ್ದೇಶ ಅಸಲಕರ 168 ಎಸೆತಗಳಲ್ಲಿ 87 ರನ್ ಗಳಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. ಎದುರಾಳಿ ಕಾರವಾರ ನಗರ ತಂಡ 19.3 ಓವರ್ಗಳಲ್ಲಿ 34 ರನ್ ಮಾತ್ರ ಗಳಿಸಿ ಆಲೌಟ್ ಆಯಿತು. ಅರ್ಜುನ ಜಗದೀಶ ನಾಲ್ಕು, ಅಕ್ಷಯ ಬಗಾಡಿ ಮತ್ತು ಸಮರ್ಥ ಪವಾಲೆ ತಲಾ ಮೂರು ವಿಕೆಟ್ ಕಬಳಿಸಿ ಗೆಲುವಿನಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸಿದರು.