<p><strong>ಹುಬ್ಬಳ್ಳಿ: </strong>ಮಹಾನಗರ ಪಾಲಿಕೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಮಂಗಳವಾರ ಬಿಜೆಪಿ, ಕಾಂಗ್ರೆಸ್, ಎಎಪಿ ನಾಯಕರ ದಂಡು ಪ್ರಚಾರ ನಡೆಸಿತು.</p>.<p>ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್, ಸಚಿವ ಶಂಕರಪಾಟೀಲ ಮುನೇನಕೊಪ್ಪ, ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ, ಶಾಸಕ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಎಎಪಿಯ ಪೃಥ್ವಿ ರೆಡ್ಡಿ ಮತ್ತಿತರು ಬೆಂಬಲಿಗರೊಡನೆ ಬಿರುಸಿನ ಪ್ರಚಾರ ನಡೆಸಿದರು.</p>.<p>ವಾರ್ಡ್ 63ರಲ್ಲಿ ಮಲ್ಲಪ್ಪ ಶಿರಕೋಳ, 67ರಲ್ಲಿ ಶಿವು ಮೆಣಸಿನಕಾಯಿ ಮತ್ತು 80ರಲ್ಲಿ ಶಾಂತಾ ಹಿರೇಮಠ ಪರ ಮತ ಕೇಳಿದರು. ಶೆಟ್ಟರ್ ಓಣಿಯಲ್ಲಿ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಕಟೀಲ್ ಅವರಿಗೆ ಆರತಿ ಮಾಡಿ ಸ್ವಾಗತಿಸಿದರು.</p>.<p>ಶಾಸಕ ಜಗದೀಶ ಶೆಟ್ಟರ್ ಅವರು 37ನೇ ವಾರ್ಡ್ನಲ್ಲಿ ಉಮೇಶಗೌಡ ಕೌಜಗೇರಿ ಪರ, ಸಚಿವ ಶಂಕರಪಾಟೀಲ ಮುನೇನಕೊಪ್ಪ 39ನೇ ವಾರ್ಡ್ನಲ್ಲಿ ಸೀಮಾಸಿದ್ದು ಮೊಗಲಿಶೆಟ್ಟರ್ ಮತಯಾಚಿಸಿದರು.</p>.<p>ಕಾಂಗ್ರೆಸ್ನಲ್ಲಿಯೂ ಚುರುಕು: ಶಾಸಕ ಎಚ್.ಕೆ. ಪಾಟೀಲ ಅವರು 58ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರುತಿ ಚಲವಾದಿ ಪರ ಮತಯಾಚನೆ ಮಾಡಿದರು.</p>.<p>ಪಾಲಿಕೆ ಚುನಾವಣೆ ಕಾಂಗ್ರೆಸ್ ಉಸ್ತುವಾರಿ ಸಂಚಾಲಕ ಆರ್. ಧ್ರುವ ನಾರಾಯಣ ಅವರು ಚುನಾವಣಾ ಪ್ರಕ್ರಿಯೆ ಆರಂಭವಾದ ದಿನದಿಂದಲೂ ಹುಬ್ಬಳ್ಳಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.</p>.<p><strong>ಸ್ವತಂತ್ರ ಅಭ್ಯರ್ಥಿಗಳ ಪ್ರಚಾರವೂ ಜೋರು</strong></p>.<p>ಸ್ವತಂತ್ರವಾಗಿ ಸ್ಪರ್ಧಿಸಿರುವ ಕೆಲ ಬಂಡಾಯ ಅಭ್ಯರ್ಥಿಗಳು ಕೂಡ ವೈಯಕ್ತಿಕ ವರ್ಚಸ್ಸು ಮತ್ತು ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟು ಜೋರಾಗಿ ಪ್ರಚಾರ ಮಾಡುತ್ತಿದ್ದಾರೆ.</p>.<p>47ನೇ ವಾರ್ಡ್ನಿಂದ ಸ್ಪರ್ಧಿಸಿರುವ ಮಾಜಿ ಉಪಮೇಯರ್ ಲಕ್ಷ್ಮಿ ಉಪ್ಪಾರ, ಕಾಂಗ್ರೆಸ್ನಿಂದ ಬಂಡಾಯವೆದ್ದಿರುವ ಅಕ್ಷತಾ ಮೋಹನ ಅಸುಂಡಿ (ವಾರ್ಡ್ 82), ಗಣೇಶ ಟಗರಗುಂಟಿ (71), ಮೋಹನಾಂಬ ಗುಡಿಹಾಳ (81), ಚಂದ್ರಿಕಾ ವೆಂಕಟೇಶ್ ಮೇಸ್ತ್ರಿ (56) ಸೇರಿದಂತೆ ಅನೇಕರು ಮತಯಾಚನೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಮಹಾನಗರ ಪಾಲಿಕೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಮಂಗಳವಾರ ಬಿಜೆಪಿ, ಕಾಂಗ್ರೆಸ್, ಎಎಪಿ ನಾಯಕರ ದಂಡು ಪ್ರಚಾರ ನಡೆಸಿತು.</p>.<p>ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್, ಸಚಿವ ಶಂಕರಪಾಟೀಲ ಮುನೇನಕೊಪ್ಪ, ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ, ಶಾಸಕ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಎಎಪಿಯ ಪೃಥ್ವಿ ರೆಡ್ಡಿ ಮತ್ತಿತರು ಬೆಂಬಲಿಗರೊಡನೆ ಬಿರುಸಿನ ಪ್ರಚಾರ ನಡೆಸಿದರು.</p>.<p>ವಾರ್ಡ್ 63ರಲ್ಲಿ ಮಲ್ಲಪ್ಪ ಶಿರಕೋಳ, 67ರಲ್ಲಿ ಶಿವು ಮೆಣಸಿನಕಾಯಿ ಮತ್ತು 80ರಲ್ಲಿ ಶಾಂತಾ ಹಿರೇಮಠ ಪರ ಮತ ಕೇಳಿದರು. ಶೆಟ್ಟರ್ ಓಣಿಯಲ್ಲಿ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಕಟೀಲ್ ಅವರಿಗೆ ಆರತಿ ಮಾಡಿ ಸ್ವಾಗತಿಸಿದರು.</p>.<p>ಶಾಸಕ ಜಗದೀಶ ಶೆಟ್ಟರ್ ಅವರು 37ನೇ ವಾರ್ಡ್ನಲ್ಲಿ ಉಮೇಶಗೌಡ ಕೌಜಗೇರಿ ಪರ, ಸಚಿವ ಶಂಕರಪಾಟೀಲ ಮುನೇನಕೊಪ್ಪ 39ನೇ ವಾರ್ಡ್ನಲ್ಲಿ ಸೀಮಾಸಿದ್ದು ಮೊಗಲಿಶೆಟ್ಟರ್ ಮತಯಾಚಿಸಿದರು.</p>.<p>ಕಾಂಗ್ರೆಸ್ನಲ್ಲಿಯೂ ಚುರುಕು: ಶಾಸಕ ಎಚ್.ಕೆ. ಪಾಟೀಲ ಅವರು 58ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರುತಿ ಚಲವಾದಿ ಪರ ಮತಯಾಚನೆ ಮಾಡಿದರು.</p>.<p>ಪಾಲಿಕೆ ಚುನಾವಣೆ ಕಾಂಗ್ರೆಸ್ ಉಸ್ತುವಾರಿ ಸಂಚಾಲಕ ಆರ್. ಧ್ರುವ ನಾರಾಯಣ ಅವರು ಚುನಾವಣಾ ಪ್ರಕ್ರಿಯೆ ಆರಂಭವಾದ ದಿನದಿಂದಲೂ ಹುಬ್ಬಳ್ಳಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.</p>.<p><strong>ಸ್ವತಂತ್ರ ಅಭ್ಯರ್ಥಿಗಳ ಪ್ರಚಾರವೂ ಜೋರು</strong></p>.<p>ಸ್ವತಂತ್ರವಾಗಿ ಸ್ಪರ್ಧಿಸಿರುವ ಕೆಲ ಬಂಡಾಯ ಅಭ್ಯರ್ಥಿಗಳು ಕೂಡ ವೈಯಕ್ತಿಕ ವರ್ಚಸ್ಸು ಮತ್ತು ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟು ಜೋರಾಗಿ ಪ್ರಚಾರ ಮಾಡುತ್ತಿದ್ದಾರೆ.</p>.<p>47ನೇ ವಾರ್ಡ್ನಿಂದ ಸ್ಪರ್ಧಿಸಿರುವ ಮಾಜಿ ಉಪಮೇಯರ್ ಲಕ್ಷ್ಮಿ ಉಪ್ಪಾರ, ಕಾಂಗ್ರೆಸ್ನಿಂದ ಬಂಡಾಯವೆದ್ದಿರುವ ಅಕ್ಷತಾ ಮೋಹನ ಅಸುಂಡಿ (ವಾರ್ಡ್ 82), ಗಣೇಶ ಟಗರಗುಂಟಿ (71), ಮೋಹನಾಂಬ ಗುಡಿಹಾಳ (81), ಚಂದ್ರಿಕಾ ವೆಂಕಟೇಶ್ ಮೇಸ್ತ್ರಿ (56) ಸೇರಿದಂತೆ ಅನೇಕರು ಮತಯಾಚನೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>