ಧಾರವಾಡ: ನಗರದ ಎಲ್ಐಸಿ ಕಚೇರಿ ಸಮೀಪ ಆಟೊ ರಿಕ್ಷಾದಲ್ಲಿ ಬಂದ ನಾಲ್ವರು ಮೂವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ. ಯುವತಿ ವಿಚಾರದಲ್ಲಿ ಗಲಾಟೆಯಾಗಿ ಕೃತ್ಯ ಎಸಗಿದ್ಧಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಗದ ಗ್ರಾಮದ ಕಿರಣ್, ಧಾರವಾಡ ಆಸೀಫ್ ಹುನಗುಂದ ಹಾಗೂ ಶಾನುವಾಜ್ ಅವರಿಗೆ ಹೊಟ್ಟೆ ಮತ್ತು ಬೆನ್ನಿಗೆ ಇರಿಯಲಾಗಿದೆ. ಮೂವರನ್ನು ಹುಬ್ಬಳ್ಳಿಯ ಕಿಮ್ಸ್ನಲ್ಲಿ ದಾಖಲಿಸಲಾಗಿದೆ.
‘ಅಮ್ಮಿನಭಾವಿಯ ಯವತಿಯೊಬ್ಬರ ವಿಚಾರದಲ್ಲಿ ಕಿರಣ್ ಮತ್ತು ಸಾಹಿಲ್ ನಡುವೆ ಗಲಾಟೆ ನಡೆದಿದೆ. ಸಾಹಿಲ್ ಸಹಿತ ನಾಲ್ವರು ಆಟೊ ರಿಕ್ಷಾದಲ್ಲಿ ಬಂದು ಕೃತ್ಯ ಎಸಗಿದ್ಧಾರೆ ಎಂದು ಗೊತ್ತಾಗಿದೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದೇವೆ’ ಎಂದು ಉಪನಗರ ಠಾಣೆ ಪಿಎಸ್ಐ ‘ಪ್ರಜಾವಾಣಿ‘ಗೆ ತಿಳಿಸಿದರು.
ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ಧಾರೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.