ಸ್ಥಳಾಂತರ: ‘ಮೂರು ತಂಗುದಾಣಗಳ ಪೈಕಿ, ಮಹಾನಗರ ಪಾಲಿಕೆ ಎದುರಿನ ತಂಗುದಾಣವನ್ನು ತೆರವುಗೊಳಿಸಿ, ಅಲ್ಲಿಂದ ಸ್ವಲ್ಪ ಮುಂದಕ್ಕೆ ಕೃಷ್ಣಭವನ ಹೋಟೆಲ್ ಎದುರಿಗೆ ತಂಗುದಾಣ ನಿರ್ಮಿಸಿ ಕೊಡಲಾಗುವುದು. ಹೊಸೂರು ತಂಗುದಾಣವನ್ನು ಸಹ ಮುಂದಕ್ಕೆ ಸ್ಥಳಾಂತರಿಸಿ, ಹೊಸದನ್ನು ನಿರ್ಮಿಸಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಗಂಗಾಧರ ಚಳಗೇರಿ ಹೇಳಿದರು.